×
Ad

ಮಠಗಳ ಅನುದಾನಕ್ಕೆ ಕಮಿಷನ್ ಆರೋಪ; ದಿಂಗಾಲೇಶ್ವರ ಶ್ರೀಗಳು ಹೇಳಿದ್ದು ಸತ್ಯ: ಚನ್ನಬಸವಾನಂದ ಸ್ವಾಮೀಜಿ

Update: 2022-04-20 19:37 IST
ಚನ್ನಬಸವಾನಂದ ಸ್ವಾಮೀಜಿ | ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: 'ಮಠಗಳಿಗೆ ಸರ್ಕಾರದ ಅನುದಾನ ಪಡೆಯಲು ಕಮಿಷನ್ ನೀಡಬೇಕಾಗುತ್ತದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿರುವುದರಲ್ಲಿ ಸತ್ಯವಿದೆ' ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಎಲ್ಲ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಕಮಿಷನ್‌ ಪಡೆಯುತ್ತವೆ. ಆದರೆ, ಅವರು ಪಡೆಯುವ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸ ಇರುತ್ತದೆ ಅಷ್ಟೇ.  ನಮ್ಮ ಪೀಠಕ್ಕೂ ಅನುದಾನ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇನ್ನೂ ಕೊಟ್ಟಿಲ್ಲ' ಎಂದು ತಿಳಿಸಿದರು. 

'ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲಿಗೆ ತಲುಪಿದೆಯೆಂದರೆ ಮಠಗಳಿಗೆ ಸರಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲೂ ಶೇ.30ರಷ್ಟು ಕಮಿಷನ್‌ ನೀಡಬೇಕಿದೆ' ಎಂದು ಇತ್ತೀಚೆಗೆ ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಆರೋಪ ಮಾಡಿದ್ದರು. 

ಇದನ್ನೂ ಓದಿ... ಮಠಗಳಿಗೆ ಬಿಡುಗಡೆಯಾಗುವ ಅನುದಾನ ಪಡೆಯಲೂ ಶೇ.30ರಷ್ಟು ಕಮಿಷನ್‌ ನೀಡಬೇಕಿದೆ: ದಿಂಗಾಲೇಶ್ವರ ಸ್ವಾಮೀಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News