ಬೆಳಗಾವಿ ಜಿ.ಪಂ ಮಾಜಿ ಅಧ್ಯಕ್ಷೆಯ ಅನುಮತಿ ಪತ್ರ ನಕಲು ಆರೋಪ: ಎಫ್ಐಆರ್ ದಾಖಲು
Update: 2022-04-21 17:22 GMT
ಬೆಂಗಳೂರು, ಎ.21: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲೆ ನಕಲು ಮಾಡಿರುವ ಆರೋದಪಡಿ ಮೊಕದ್ದಮೆ ದಾಖಲಾಗಿದೆ.
ಬೆಳಗಾವಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯ ಪತ್ರವನ್ನು ನಕಲು ಮಾಡಿರುವ ಆರೋಪ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿರುವ ದೂರಿನ್ವಯ ಮೊಕದ್ದಮೆ ದಾಖಲಾಗಿದೆ.
ಬೆಳಗಾವಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ಐಹೊಳೆ ಅವರು ಕಾಮಗಾರಿ ಮಾಡಲು ಅನುಮತಿ ನೀಡಿದ್ದಾರೆ ಎಂಬ ಪತ್ರವೊಂದು ವೈರಲ್ ಆಗಿತ್ತು. ಇದೇ ಪತ್ರರದ ಆಧಾರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಕಾಮಗಾರಿಗಳನ್ನು ಮಾಡಿಸದ್ದರು ಎಂದು ಹೇಳಲಾಗಿತ್ತು.
ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಪತ್ರ ನಕಲಿ ಎಂದು ದೂರು ನೀಡಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.