×
Ad

ಗುಂಡ್ಲುಪೇಟೆ: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು

Update: 2022-04-25 10:15 IST

ಚಾಮರಾಜನಗರ, ಎ.25:  ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಕಳ್ಳಿ ಕಾಲನಿಯಲ್ಲಿ ರವಿವಾರ ನಡೆದಿದೆ.

ಮೂಕಳ್ಳಿ ಕಾಲನಿಯ ನಿವಾಸಿಗಳಾದ ಮಹೇಶ್(15) ಮತ್ತು ವಿಶ್ವ(17) ಕೆರೆಯಲ್ಲಿ ಮುಳುಗಿ ಮೃತಪಟ್ಟ ಬಾಲಕರಾಗಿದ್ದಾರೆ.

 ಈ ಯುವಕರು ಹೊಸಕಟ್ಟೆ ಕೆರೆಯಲ್ಲಿ ಈಜಾಡಲು ತೆರಳಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ ಸುರಿದ ಮಳೆ ನೀರಿಗೆ ಕೆರೆಯು ಒಂದೇ ದಿನದಲ್ಲಿ ಭರ್ತಿಯಾಗಿತ್ತು . ರಜಾ ದಿನವಾದ ಕಾರಣ ಕೆರೆಗೆ ಈಜಾಡಲು ತೆರಳಿದ್ದ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

 ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News