ಝಮೀರ್ ಅಹ್ಮದ್ ಗೆ ಬಿಜೆಪಿಯ ಒಬ್ಬ ಮಹಾನಾಯಕನ ಬೆಂಬಲ ಇದೆ: ಶಾಸಕ ಯತ್ನಾಳ್

Update: 2022-04-30 08:36 GMT
ಶಾಸಕ ಯತ್ನಾಳ್ | ಝಮೀರ್ ಅಹ್ಮದ್

ವಿಜಯಪುರ:  ಹಳೇ ಹುಬ್ಬಳ್ಳಿ ದಾಂಧಲೆ ಪ್ರಕರಣದ ಆರೋಪಿಗಳಿಗೆ ಶಾಸಕ ಝಮೀರ್ ಅಹ್ಮದ್  ಅವರು ಆಹಾರದ ಕಿಟ್ ವಿತರಣೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಕ್ರಿಯಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  'ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಾಸಕ ಝಮೀರ್‌ ನನ್ನು ಒದ್ದು ಒಳಗೆ ಹಾಕಬೇಕು' ಎಂದು ವಾಗ್ದಾಳಿ ನಡೆಸಿದ್ದಾರೆ.

​'ಝಮೀರ್ ಹಿಂದೂ ವಿರೋಧಿ ಹಾಗೂ ನಮ್ಮ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾರೆ. ಝಮೀರ್‌ಗೆ ನಮ್ಮ ಸರ್ಕಾರದ ಸಲುಗೆ ಇದೆ, ಎಲ್ಲಾ ಹೊಂದಾಣಿಕೆ ಇದೆ. ಝಮೀರ್ ಅಹ್ಮದ್ ವಿರುದ್ಧ ಕೇಸ್ ದಾಖಲು ಮಾಡಬೇಕು. ಬಿಜೆಪಿಯಲ್ಲಿ ಮಹಾನಾಯಕನ ಬೆಂಬಲ ಝಮೀರ್​ ಗೆ ಇದೆ, ಅವರದ್ದೆಲ್ಲ ಒಂದೇ ಬ್ಯುಸಿನೆಸ್' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News