ಹಗರಣಗಳ ಪಿತಾಮಹ ಸಿದ್ದರಾಮಯ್ಯ: ಬಿಜೆಪಿ ತಿರುಗೇಟು
ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಪ್ರಭಾವಿ ವ್ಯಕ್ತಿಗಳು ಬಾಗಿಯಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದ್ದು, ಇತ್ತ ಕಾಂಗ್ರೆಸ್ -ಬಿಜೆಪಿ ಪಕ್ಷಗಳ ಮಧ್ಯೆ ಆರೋಪ ಪ್ರತ್ಯಾರೋಪಗಳು ಮುಂದುವರಿದಿದೆ.
ಇದೀಗ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ವಾತಾವರಣ ಮೂಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಬಿಜೆಪಿ ತಿರುಗೇಟು ನಿಡಿದೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಕೈಯಲ್ಲಿ ಗೃಹ ಇಲಾಖೆಯನ್ನು ಅಡವಿಟ್ಟ ಸಿದ್ದರಾಮಯ್ಯ ಅವರೇ ಗೃಹ ಇಲಾಖೆಯ ಎಲ್ಲ ಹಗರಣಗಳ ಪಿತಾಮಹ' ಎಂದು ಆರೋಪಿಸಿದೆ.
'ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ವಾತಾವರಣ ಸೃಷ್ಟಿಯಾದದ್ದೇ ಸಿದ್ದರಾಮಯ್ಯ ಕಾಲದಲ್ಲಿ, ಸಿದ್ದರಾಮಯ್ಯರೇ ಭ್ರಷ್ಟಾಚಾರ ಪಿತಾಮಹ. ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವಿನಂತೆ ಮಾಡದಿರುತ್ತಿದ್ದರೆ ಅರ್ಕಾವತಿ ರೀಡು ಪ್ರಕರಣದಲ್ಲಿ ಡಿಕೆಶಿ ಅವರಂತೆ ನೀವೂ ತಿಹಾರ್ ಯಾತ್ರೆ ಮಾಡಬೇಕಿತ್ತು ಎಂಬುದನ್ನು ಮರೆತಿರಾ, ಸಿದ್ದರಾಮಯ್ಯ?' ಎಂದು ಬಿಜೆಪಿ ಪ್ರಶ್ನಿಸಿದೆ.
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ವಾತಾವರಣ ಸೃಷ್ಟಿಯಾದದ್ದೇ @siddaramaiah ಕಾಲದಲ್ಲಿ, ಸಿದ್ದರಾಮಯ್ಯರೇ ಭ್ರಷ್ಟಾಚಾರ ಪಿತಾಮಹ.
— BJP Karnataka (@BJP4Karnataka) May 4, 2022
ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವಿನಂತೆ ಮಾಡದಿರುತ್ತಿದ್ದರೆ ಅರ್ಕಾವತಿ ರೀಡು ಪ್ರಕರಣದಲ್ಲಿ ಡಿಕೆಶಿ ಅವರಂತೆ ನೀವೂ ತಿಹಾರ್ ಯಾತ್ರೆ ಮಾಡಬೇಕಿತ್ತು ಎಂಬುದನ್ನು ಮರೆತಿರಾ, ಸಿದ್ದರಾಮಯ್ಯ?#ಬುರುಡೆರಾಮಯ್ಯ