ಕುಮಾರಸ್ವಾಮಿ ಸಮ್ಮುಖದಲ್ಲಿ ಮಡಿಕೇರಿ ನಗರಸಭೆಯ ನಿವೃತ್ತ ಆಯುಕ್ತೆ ಜೆಡಿಎಸ್ ಸೇರ್ಪಡೆ

Update: 2022-05-05 17:56 GMT

ಮಡಿಕೇರಿ ಮೇ 5 :  ಮಡಿಕೇರಿ ನಗರಸಭೆಯ ನಿವೃತ್ತ ಆಯುಕ್ತರಾದ ಮೂಟೆರ ಬಿ.ಬಿ. ಪುಷ್ಪಾವತಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು.

ಬೆಂಗಳೂರಿನ ಜೆಪಿ ಭವನದಲ್ಲಿ  ಕುಮಾರಸ್ವಾಮಿ ಅವರು  ಪಕ್ಷದ ಬಾವುಟ ನೀಡಿ, ಶಲ್ಯ ತೊಡಿಸಿ ಜೆಡಿಎಸ್‍ಗೆ ಬರಮಾಡಿಕೊಂಡರು.

ಈ ಸಂದರ್ಭ ಜಿಲ್ಲಾಧ್ಯಕ್ಷ  ಕೆ.ಎಂ.ಗಣೇಶ್ ,  ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ  ಇಸಾಕ್ ಖಾನ್, ಕಾರ್ಯದರ್ಶಿ ಎನ್. ಸಿ. ಸುನಿಲ್, ಖಜಾoಜಿ ಡೆನ್ನಿ ಬರೋಸ್,  ಮಹಿಳಾ ಘಟಕದ ಕಾರ್ಯದರ್ಶಿ ಲೀಲಾ ಶೇಷಮ್ಮ, ಯುವ ಘಟಕ  ನಗರ ಕಾರ್ಯದರ್ಶಿ ನಚಿಕೇತ್ ಹಾಜರಿದ್ದರು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News