ದೆಹಲಿಯಿಂದ ಬಂದವರು ನಿಮ್ಮನ್ನು ಸಿಎಂ ಮಾಡ್ತೀವಿ 2,500 ಕೋಟಿ ಕೊಡಿ ಅಂತ ಹೇಳಿದ್ದರು: ಶಾಸಕ ಯತ್ನಾಳ್

Update: 2022-05-06 09:02 GMT

ಬೆಳಗಾವಿ:  'ದೆಹಲಿಯಿಂದ ಬಂದ ಕೆಲವರು ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂತ ಹೇಳಿದ್ದರು' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ರಾಮದುರ್ಗದಲ್ಲಿ ಗುರುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ ಅವರು, ರಾಜಕಾರಣದಲ್ಲಿ ಯಾರೂ ಮೋಸ ಹೋಗಬೇಡಿ. ದೆಹಲಿಗೆ ಹೋಗಿ ಸೋನಿಯಾ ಗಾಂಧಿ , ನಡ್ಡಾ ಅವರನ್ನು ಭೇಟಿ ಮಾಡಿಸ್ತೀವಿ ಅಂತ ಹೇಳುತ್ತಾರೆ. ನನ್ನ ಬಳಿಯೂ ಒಂದಷ್ಟು ಮಂದಿ ಬಂದಿದ್ದರು. ನಿಮ್ಮನ್ನು ಮುಖ್ಯಮಂತ್ರಿ ಮಾಡಿಸ್ತೇವೆ 2500 ಕೋಟಿ ರೆಡಿ ಮಾಡಿ ಇಡಿ ಅಂತ ಹೇಳಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

2500 ಕೋಟಿ ಅಂದ್ರೆ ಏನು ಅಂತ ಗೊತ್ತಾ ? ಅದನ್ನು ಕೋಣೆಯಲ್ಲಿ ಇಡೋದಾ ಇಲ್ಲ ಗೋದಾಮಿನಲ್ಲಿ ಇಡೋದಾ ಅಂತ ನಾನು ಅವರನ್ನು ಪ್ರಶ್ನೆ ಮಾಡಿದೆ ಎಂದು ಯತ್ನಾಳ್ ಹೇಳಿದರು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ಸಾಮಾಜಿಕ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ. ನೋಟ್ ಬುಕ್ ವಿತರಣೆ, ಸಾಮೂಹಿಕ ವಿವಾಹ , ತಾಳಿ ಭಾಗ್ಯ ಎಲ್ಲ ಕೊಡುತ್ತಾರೆ. ಎಲ್ಲ ಭಾಗ್ಯವನ್ನು ತಗೋಳಿ ವೋಟ್ ಮಾತ್ರ ಒಳ್ಳೆಯ ಭಾಗ್ಯ ಇರುವವರಿಗೆ ಕೊಡಿ ಎಂದು ಹೇಳಿದರು.  

ಇದನ್ನೂ ಓದಿ… ಮೂಡಿಗೆರೆ : ಶಾಸಕ ಎಂ.ಪಿ ಕುಮಾರಸ್ವಾಮಿಯಿಂದ ಸಬ್ ಇನ್ಸ್‌ಪೆಕ್ಟರ್ ರವೀಶ್ ಗೆ ನಿಂದನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News