ಕೋವಿಡ್‌ ಸಂಬಂಧಿತ ಸಾವುಗಳ ಕುರಿತ ಅಪಪ್ರಚಾರಗಳಿಗೆ ಕಿವಿಗೊಡಬೇಡಿ: ಆರೋಗ್ಯ ಸಚಿವ ಕೆ. ಸುಧಾಕರ್‌

Update: 2022-05-06 12:37 GMT
 ಆರೋಗ್ಯ ಸಚಿವ ಕೆ. ಸುಧಾಕರ್‌

ಬೆಂಗಳೂರು: 'ಕರ್ನಾಟಕದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಅಂಕಿ-ಅಂಶ ಸ್ಪಷ್ಟವಾಗಿದೆ. ಅಪಪ್ರಚಾರಗಳಿಗೆ ಜನ ಕಿವಿಗೊಡುವುದು ಬೇಡ' ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ಅವರು ಹೇಳಿದ್ದಾರೆ.

ಶುಕ್ರವಾರ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ' ಕರ್ನಾಟಕದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಅಂಕಿ-ಅಂಶ ಸ್ಪಷ್ಟವಾಗಿದೆ. ಕೊರೋನ ಅಂಕಿ-ಅಂಶ ದಾಖಲಿಸಲು ರಾಜ್ಯದಲ್ಲಿ ಪಾರದರ್ಶಕ ವ್ಯವಸ್ಥೆ ಪಾಲಿಸಲಾಗಿದ್ದು ಈವರೆಗೂ 40,060 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಅಧಿಕೃತ ದಾಖಲಾತಿ ಇದೆ. ಕೊರೊನಾ ಅಂಕಿ-ಅಂಶ ಬಗ್ಗೆ ಯಾವುದೇ ಊಹಾಪೋಹಗಳು, ಅಪಪ್ರಚಾರಗಳಿಗೆ ಕಿವಿಗೋಡುವುದು ಬೇಡ' ಎಂದು ತಿಳಿಸಿದ್ದಾರೆ.

2020 ಮತ್ತು 2021ರಲ್ಲಿ  ಭಾರತದಲ್ಲಿ 4.7 ಮಿಲಿಯನ್ ಗೂ ಅಧಿಕ  ಸಾವು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಗುರುವಾರ ಅಂದಾಜು ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News