ಪಿಎಸ್‍ಐ ನೇಮಕಾತಿ ಪ್ರಕರಣ: ಕೆಎಸ್‍ಆರ್ ಪಿ ಡಿವೈಎಸ್ಪಿ ವೈಜನಾಥ್ ಸಿಐಡಿ ವಶಕ್ಕೆ

Update: 2022-05-06 15:22 GMT

ಕಲಬುರಗಿ, ಮೇ 6: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‍ಆರ್‍ಪಿ) ಕಲಬುರಗಿ ವಿಭಾಗದ ಡಿವೈಎಸ್ಪಿ ವೈಜನಾಥ ಅವರನ್ನು ಇಂದು ಸಂಜೆ ವಶಕ್ಕೆ ಪಡೆದರು.

ವೈಜನಾಥ ಸಹ ಹಲವು ವರ್ಷಗಳಿಂದ ಅಕ್ರಮ ನೇಮಕಾತಿ ಮಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಕೆಎಸ್‍ಆರ್‍ಪಿಯ ನಾಲ್ಕನೇ ಪ್ರಶಿಕ್ಷಣಾರ್ಥಿಗಳ ತಂಡದ ನಿರ್ಗಮನ ಪಥಸಂಚಲನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಭಾಗವಹಿಸಿ ತೆರಳಿದ ಬೆನ್ನಲ್ಲೇ ಕೆಎಸ್‍ಆರ್‍ಪಿಯ ಹಿರಿಯ ಅಧಿಕಾರಿಯ ಬಂಧನವಾಗಿದೆ.

ವೈಜನಾಥ ಮೂಲತಃ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದವರು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News