ಅಕ್ರಮ ಪ್ರಕರಣದಿಂದ ರಕ್ಷಣೆ ಪಡೆಯಲು ಅಶ್ವತ್ಥ್ ನಾರಾಯಣ ಎಂ.ಬಿ ಪಾಟೀಲ್ ರನ್ನು ಭೇಟಿಯಾಗಿದ್ದಾರೆ: ಡಿ.ಕೆ ಶಿವಕುಮಾರ್

Update: 2022-05-10 10:29 GMT

ಬೆಂಗಳೂರು:  'ಪಿಡಬ್ಲ್ಯೂಡಿ, ಕೆಪಿಎಸ್ಸಿ, ಸಹಾಯ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಅಕ್ರಮ ನಡೆದಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. 

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು,  ಸಚಿವ ಅಶ್ವತ್ಥ್ ನಾರಾಯಣ್ ಅವರು 'ಅಕ್ರಮ ಪ್ರಕರಣದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವುದಕ್ಕಾಗಿ ಎಂ.ಬಿ ಪಾಟೀಲರ ಮನೆಗೆ ಹೋಗಿ ಬಂದಿದ್ದಾರೆ. ಕಾಂಗ್ರೆಸ್ ಪಾರ್ಟಿಯವರು ಧ್ವನಿ ಎತ್ತಬಾರದು ಅಂತ ಹೇಳಿ ಮನವೊಲಿಸುವುದಕ್ಕಾಗಿ ಭೇಟಿಯಾಗಿದ್ದಾರೆ' ಎಂದು ತಿಳಿಸಿದರು. 

'ಬಿ.ಕೆ ಹರಿಪ್ರಸಾದ್  ಅವರ   ಹೇಳಿಕೆಯನ್ನು ಮಾಧ್ಯಮಗಳು ತಿರುಚಬಾರದು. ಶಾಂತಿ ಕದಡುವವರು ಭಯೋತ್ಪಾದಕರು ಎಂದಷ್ಟೇ ಅವರು ಹೇಳಿರುವುದು' ಎಂದು ಇದೇ ವೇಳೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News