ಬಾರ್ ಸ್ಥಳಾಂತರ ಆದೇಶ ರದ್ದುಗೊಳಿಸಿದ ಹೈಕೋರ್ಟ್

Update: 2022-05-11 13:32 GMT

ಬೆಂಗಳೂರು, ಮೇ 11: ಕಮ್ಮನಹಳ್ಳಿಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನ್ನು ಕೋರಮಂಗಲದ ಕೆ.ಸಿ.ಮಲ್ಲಪ್ಪರೆಡ್ಡಿ ಬಡಾವಣೆಗೆ ಸ್ಥಳಾಂತರಿಸಲು ಬೆಂಗಳೂರು ಅಬಕಾರಿ ಉಪ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.  

ಬಾರ್ ಸ್ಥಳಾಂತರಕ್ಕೆ ಅಬಕಾರಿ ಉಪ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಜಾಕಾಲದ ಪೀಠ, ಈ ಆದೇಶ ನೀಡಿದೆ. 

ಬಾರ್ ಸ್ಥಳಾಂತರಕ್ಕೆ ಬೆಂಗಳೂರು ಅಬಕಾರಿ ಉಪ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಕರ್ನಾಟಕ ಅಬಕಾರಿ(ಪರವಾನಿಗೆ ಸಾಮಾನ್ಯ ಷರತ್ತುಗಳು) ಅಧಿನಿಯಮ-1967ರ ನಿಯಮ 5 ಉಲ್ಲಂಘನೆಯಾಗಿದೆ ಎಂದು ಮನವರಿಕೆಯಾಗಿದೆ ಎಂದು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. 

ಈ ಹೇಳಿಕೆ ಪರಿಗಣಿಸಿದ ಪೀಠ, ಬಾರ್ ಸ್ಥಳಾಂತರಕ್ಕೆ ಹೊರಡಿಸಲಾಗಿದ್ದ ಆದೇಶ ನಿಯಮಬಾಹಿರವಾಗಿದೆ ಎಂದು ಸರಕಾರವೇ ಒಪ್ಪಿಕೊಂಡಿರುವುದರಿಂದ ಆ ಆದೇಶವನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News