ಕೊಳ್ಳೇಗಾಲ: ಮಗಳಿಗೆ‌ ಕಿರುಕುಳ ಕೊಡುತ್ತಿದ್ದ ಅಳಿಯನನ್ನು ಹತ್ಯೆಗೈದು ಪೊಲೀಸರಿಗೆ ಶರಣಾದ ಮಾವ

Update: 2022-05-11 16:31 GMT
ಜೂಲಿಯನ್ ರಾಜ್

ಚಾಮರಾಜನಗರ : ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಅಳಿಯನನ್ನೇ ಮಾವ ಹತ್ಯಗೈದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸಮೀಪದ ಜಾಗೇರಿಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಜಾಗೇರಿಯ ಅಂಥೋಣಿರಾಜ್ ಮೃತ ದುದೈ೯ವಿಯಾಗಿದ್ದಾನೆ.

ಘಟನೆ ವಿವರ: ಕಳೆದ ಮೂರು ವಷ೯ದ ಹಿಂದೆ ಜಾನ್ಸಿ ಯನ್ನು ಪ್ರೀತಿಸಿ ಮದುವೆಯಾಗಿದ್ದ ಮೃತ ಅಂಥೋಣಿರಾಜ್,  ಪ್ರತಿದಿನ ಕುಡಿದು ಬಂದು ಹೆಂಡತಿಗೆ ಕಿರುಕುಳ ಕೊಡುತ್ತಿದ್ದ ಎಂದು ಹೇಳಲಾಗಿದೆ. ಈ ವಿಚಾರ ತಿಳಿದ ಮಾವ ಮಗಳನ್ನು ಮೆನೆಗೆ ಕರೆದುಕೊಂಡು ಹೋಹಿದ್ದ. ಇದರಿಂದ ಬೇಸತ್ತ ಅಂಥೋಣಿರಾಜ್  ಬುಧವಾರ ಸಂಜೆ ಹೆಂಡತಿ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ. ವಿಷಯ ತಿಳಿದು ಮನೆಗೆ ಬಂದ ಮಾವ ಜೂಲಿಯನ್ ರಾಜು ಜೊತೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿ ಮಾವ ಅಂಥೋಣಿರಾಜ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದೀಗ  ಮಾವ ಜೂಲಿಯನ್ ರಾಜ್ ಪೋಲಿಸರಿಗೆ ಶರಣಾಗಿದ್ದಾನೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ   ಸತ್ತೇಗಾಲ ಜಾಗೇರಿಯ ಫಾಸ್ಕಲ್ ನಗರದಲ್ಲಿ ಘಟನೆ ನಡೆದಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News