ಜೀವ ಬಿಟ್ಟರೂ ಜಗ್ಗದ ಬಿಜೆಪಿ, ರಕ್ತಪತ್ರಕ್ಕೆಲ್ಲ ಬಗ್ಗುವುದೇ?: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

Update: 2022-05-16 17:55 GMT

ಬೆಂಗಳೂರು, ಮೇ 16: ‘ಗುತ್ತಿಗೆದಾರರು ಪತ್ರಗಳನ್ನು ಬರೆದರು, ಸಂತೋಷ್ ಪಾಟೀಲ್ ಪತ್ರ ಬರೆದರು, ಈಗ ಪಿಎಸ್ಸೈ ಅಕ್ರಮದಿಂದ ನೊಂದವರು ಪತ್ರ ಬರೆದಿದ್ದಾರೆ' ಎಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸೋಮವಾರ ಟ್ವೀಟ್ ಮಾಡಿರುವ ಅವರು, ‘ಸಂತೋಷ್ ಪಾಟೀಲ್ ಜೀವ ಬಿಟ್ಟರೂ ಜಗ್ಗದ ಬಿಜೆಪಿ, ರಕ್ತಪತ್ರಕ್ಕೆಲ್ಲ ಬಗ್ಗುವುದೇ? ಬಿಜೆಪಿ ಆಳ್ವಿಕೆಯಿಂದಾಗಿ ಯುವಕರು ಬದುಕಿನ ಭರವಸೆ ಕಳೆದುಕೊಳ್ಳುತ್ತಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ' ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ... ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಅಭ್ಯರ್ಥಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News