ಇದು ಕೋಮುವಾದದ ಉಚ್ಛ್ರಾಯ ಸ್ಥಿತಿ: ಡಾ.ಎಲ್.ಹನುಮಂತಯ್ಯ ವಾಗ್ದಾಳಿ

Update: 2022-05-16 15:03 GMT

ಬೆಂಗಳೂರು: 'ಈ ಮೊದಲೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಯುವಕರ ಕೈಗೆ ತ್ರಿಶೂಲ ಕೊಡುವುದನ್ನು ಬಿಜೆಪಿ ಮಾಡಿತ್ತು. ಈಗ ಈ ಟ್ರೆಂಡ್ ಕರ್ನಾಟಕದಲ್ಲಿ ಶುರು ಮಾಡುವ ಮೂಲಕ ಮುಂದಿನ ಚುನಾವಣೆಗೆ ನಾಂದಿ ಹಾಡಿದೆ. ಇದು ಕೋಮುವಾದದ ಉಚ್ಛ್ರಾಯ ಸ್ಥಿತಿ' ಎಂದು ರಾಜ್ಯಸಭಾ ಸದಸ್ಯ. ಡಾ.ಎಲ್.ಹನುಮಂತಯ್ಯ ವಾಗ್ದಾಳಿ ನಡೆಸಿದ್ದಾರೆ. 

ಈ ಕುರಿತು 'ವಾರ್ತಾ ಭಾರತಿ'ಗೆ ಪ್ರತಿಕ್ರಿಯಿಸಿರುವ ಅವರು,  ''ಆ ಮೂಲಕ ಚುನಾವಣೆಯನ್ನು ಗೆಲ್ಲುತ್ತೇವೆ ಅಂತಿದ್ರೆ, ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಇನ್ನು ಗೃಹಮಂತ್ರಿಗಳು ಇದನ್ನು ನೋಡಿಯೂ ನೋಡದಂತೆ ಇರುವುದು ದುರದೃಷ್ಟಕರ. ಇಂತಹ ಗೃಹಮಂತ್ರಿಯನ್ನು ರಾಜ್ಯ ಇಲ್ಲಿಯವರೆಗೆ ಕಂಡಿದ್ದಿಲ್ಲ. ಬಿಜೆಪಿಯವರು ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹವಣಿಸಿದರೆ ರಾಜ್ಯದ ಜನ ಖಂಡಿತ ಬುದ್ಧಿ ಕಲಿಸುತ್ತಾರೆ'' ಎಂದು ಕಿಡಿಗಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News