ಮೈಸೂರು: ಶಾಲೆ ಬೀಗ ಮುರಿದು ಕಂಪ್ಯೂಟರ್ ಕಳವು; ದೂರು

Update: 2022-05-16 17:47 GMT

ಮೈಸೂರು,ಮೇ.16: ಸರ್ಕಾರಿ ಶಾಲೆಯೊಂದರ ಬೀಗ ಮುರಿದ ಕಳ್ಳರು ಕಂಪ್ಯೂಟರ್ ಗಳನ್ನು ಕದ್ದೊಯ್ದ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ.

ಮೇ.12ರಂದು ಬನ್ನಿ ಮಂಟಪದ ಹುಡ್ಕೋದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಬೀಗವನ್ನು ಹಾಕಿಕೊಂಡು ಹೋಗಿದ್ದು ಮೇ.14ರಂದು ಶಿಕ್ಷಕರು ಶಾಲೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಯ ಒಂದು ಕೊಠಡಿಯ ಬೀಗಮುರಿದಿರುವ ಕಳ್ಳರು ಡೆಲ್ ಕಂಪನಿಯ ಒಂದು ಮಾನಿಟರ್, ಸಿಪಿಯು ಮುಂತಾದವುಗಳನ್ನು ಕಳುವು ಮಾಡಿದ್ದು ಮೂರನೇ ಮಹಡಿಯ ಕಂಪ್ಯೂಟರ್ ಕೊಠಡಿಯ ಬಾಗಿಲು ಮುರಿದು 9 ಮಾನಿಟರ್ ಮತ್ತು ಸಿಪಿಯುಗಳಲ್ಲಿ ಒಂದು ಮಾನಿಟರ್ ನ್ನು ಕಳುವು ಮಾಡಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ರುಕ್ಮಿಣಿ ದೂರನ್ನು ನೀಡಿದ್ದಾರೆ.

ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News