21ನೆ ಶತಮಾನದ ಯಾಂತ್ರಿಕ ಯುಗದಲ್ಲಿ ಚರ್ಮ ಕುಶಲಕರ್ಮಿಗಳ ಬದುಕು, ಬವಣೆ ಪರಿಹಾರ ಕಾರ್ಯಕ್ರಮ

Update: 2022-05-16 18:06 GMT

ಬೆಂಗಳೂರು, ಮೇ 16: ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಅರಮನೆ ಮೈದಾನದಲ್ಲಿ 5 ದಿನಗಳ ಕಾಲ ರಾಜ್ಯ ಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಮ್ಮಿಕೊಂಡಿದ್ದು, ಸೋಮವಾರ 21ನೆ ಶತಮಾನದ ಯಾಂತ್ರಿಕ ಯುಗದಲ್ಲಿ ಚರ್ಮ ಕುಶಲಕರ್ಮಿಗಳ ಬದುಕು, ಬವಣೆ ಪರಿಹಾರ ಈ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ವಹಿಸಿದ್ದರು. 

ಸಮಾಜ ಕಲ್ಯಾಣ ಇಲಾಖೆಯ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ನೋಡಲ್ ಏಜೆನ್ಸಿ  ಡಾ.ಇ.ವೆಂಕಟಯ್ಯ, ನಾಡೋಜ ಗೋನಾಳ ಭೀಮಪ್ಪ, ಸಮುದಾಯ ಚಿಂತಕರು ಹಾಗೂ ಶಿಕ್ಷಣ ತಜ್ಞರು ವಿಷಯ ಮತ್ತು ಪರಿಹಾರಗಳ ಬಗ್ಗೆ ಅವಲೋಕನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News