ಸಿಎಂ ದೆಹಲಿಗೆ ಭೇಟಿಗೂ, ಸಂಪುಟ ವಿಸ್ತರಣೆಗೂ ಸಂಬಂಧ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-05-21 09:07 GMT

ಶಿವಮೊಗ್ಗ:  ಸಿಎಂ ದೆಹಲಿ ಭೇಟಿಗೂ, ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ದೆಹಲಿ ಭೇಟಿ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದಿತ್ತು. ಈಗಲೂ ಅದೇ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ದೆಹಲಿ ಭೇಟಿಗೂ ಸಂಪುಟ ವಿಸ್ತರಣೆಗೂ ಯಾವುದೆ ಸಂಬಂಧವಿಲ್ಲ ಎಂದರು.

ಪಿಎಸ್​ಐ ನೇಮಕಾತಿ ಸಂಬಂಧ ಮತ್ತೆ ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ವಿಚಾರವಾಗಿ ಮಾತನಾಡಿದ  ಜ್ಞಾನೇಂದ್ರವರು, ಇನ್ನೂ ದಿನಾಂಕ ನಿಗದಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪಿಎಸ್ಐ ಹಗರಣದಲ್ಲಿ, ಕೆಲವರನ್ನು ವಶಕ್ಕೆ ಪಡೆದು, ಸಿಐಡಿ ವಿಶೇಷವಾಗಿ ತನಿಖೆ ನಡೆಸುತ್ತಿದೆ. ಇದರ ನಡುವೆ ಇಡಿ ಅಧಿಕಾರಿಗಳು ನಿನ್ನೆ ಕೂಡ ಗುಲ್ಬರ್ಗದಲ್ಲಿ ಒಂದು ಕೋಟಿ ರೂ. ವಶ ಪಡಿಸಿಕೊಂಡಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ 2.19 ಕೋಟಿ ರೂ. ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಪ್ರಕರಣವನ್ನು ಲಾಜಿಕಲ್ ಎಂಡಿಂಗ್ ಗೆ ತೆಗೆದುಕೊಂಡು ಹೋಗುತ್ತೇವೆ. ಯಾವ ಮುಖ ಮುಲಾಜಿಲ್ಲದೇ ಸಾಕ್ಷಾಧಾರ ಸಹಿತ ಯಾರನ್ನಾದರೂ ಅರೆಸ್ಟ್ ಮಾಡ್ತಾರೆ. ಹಣದ ಸಹಿತ ಎಲ್ಲಾ ದಾಖಲೆ ಕಲೆಕ್ಟ್​ ಮಾಡ್ತಾರೆ. ಫಾಸ್ಟ್ ಟ್ರಾಕ್ ಕೋರ್ಟ್ ತನಿಖೆ ಮುಗಿದ ಬಳಿಕ ಯೋಚನೆ ಮಾಡ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News