ದಾವಣಗೆರೆ: ದೇವಸ್ಥಾನ ಪೂಜಾರಿ ಭೀಕರ ಹತ್ಯೆ
Update: 2022-05-23 15:12 GMT
ದಾವಣಗೆರೆ : ನಿರ್ಜನಪ್ರದೇಶದ ಜಮೀನಿನಲ್ಲಿ ದೇವಸ್ಥಾನವೊಂದರ ಪೂಜಾರಿಯ ಹತ್ಯೆ ಮಾಡಿ ದುಷ್ಕರ್ಮಿರ್ಮಿಗಳು ಪರಾರಿಯಾದ ಘಟನೆ ಸೋಮವಾರ ನಡೆದಿದೆ.
ಕುಮಾರಸ್ವಾಮಿ (45) ಹತ್ಯೆಯಾದ ಪೂಜಾರಿ ಎಂದು ತಿಳಿದು ಬಂದಿದೆ.
ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಿ ಕುಮಾರಸ್ವಾಮೀಯನ್ನು ಕಡದಕಟ್ಟೆ ಗ್ರಾಮದ ಜಮೀನಿನಲ್ಲಿ ಹತ್ಯೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಕಾರು ಪತ್ತೆಯಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಭೇಟಿ ಪರಿಶೀಲನೆ ನಡೆಸಿದರು.