ಬೇಲೂರು: ಒಂಟಿ ಸಲಗ ಅನುಮಾನಾಸ್ಪದ ಸಾವು
Update: 2022-05-27 17:05 GMT
ಬೇಲೂರು: ತಾಲೂಕಿನ ಗೂರ್ಗಿಹಳ್ಳಿ ಬಳಿ ಸಲಗವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಮೃತದೇಹದ ಮೇಲೆ ರಕ್ತಗಾಯದ ಗುರುತುಗಳಿದ್ದು, ಗುಂಡು ಹೊಡೆದು ಕೊಲ್ಲಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ತಾಲೂಕಿನ ಅರೇಹಳ್ಳಿ ಹೋಬಳಿಯ ಮಲಸಾವರ ಗ್ರಾಮದ ಸಮೀಪದ ಗೂರ್ಗಿಹಳ್ಳಿ ಗ್ರಾಮದ ಮಹಮದ್ ಸತ್ತಾರ್ ಎಂಬುವವರ ತೋಟದ ಸಮೀಪವಿರುವ ಭತ್ತದ ಗದ್ದೆಯಲ್ಲಿ 15 ವರ್ಷದ ಕಾಡಾನೆಯ ಶವ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್ ತಿಳಿಸಿದರು.
ಕಾಡಾನೆ ಸಾವಿನ ವಿಚಾರ ಕೇಳಿ ಪ್ರಾಣಿ ಪ್ರಿಯರು ಆಘಾತ ಹೊರ ಹಾಕಿದ್ದು, ವೈದ್ಯರಾದ ಚಿಕ್ಕಮಗಳೂರಿನ ಶ್ರೇಯಸ್, ಗಂಗಾ ಧರ್ ಮರಣೋತ್ತರ ಪರೀಕ್ಷೆ ನಡೆಸಿದರು.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.