ಟಿಪ್ಪರ್ ಲಾರಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Update: 2022-06-01 13:06 GMT

ಮಡಿಕೇರಿ ಜೂ.1  : ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರದಲ್ಲಿ ನಡೆದಿದೆ. 

ಸೊಮವಾರಪೇಟೆಯ ರಘು ಮೃತಪಟ್ಟ ವ್ಯಕ್ತಿ. ತರಗಳಲೆಯಲ್ಲಿ ರಸ್ತೆ ಕೆಲಸ ಮಾಡುತ್ತಿದ್ದ ಲಾರಿ ಆಲೂರು ಸಿದ್ದಾಪುರಕ್ಕೆ ಡಿಸಲ್ ತರಲು ಬರುತ್ತಿದ್ದ ಸಂದರ್ಭ ಬಾಣವಾರದಿಂದ ಶನಿವಾರಸಂತೆ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. 

ಘಟನೆ ಸಂದರ್ಭ ಲಾರಿ ಚಾಲಕ ಪರಾರಿಯಾಗಿದ್ದು, ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
 
ಇದೇ ಸಂದರ್ಭ ರಘು ಸಂಬಂಧಿಕರು ಮೃತದೇಹವನ್ನು ತೆಗೆಯದೆ ರಸ್ತೆ ತಡೆದು ಸೂಕ್ತ ಪರಿಹಾರ ಒತ್ತಾಯಿಸಿದರು.

ಲಾರಿ ಮಾಲಕ ದೂರವಾಣಿ ಮೂಲಕ ರೂ. ಒಂದು ಲಕ್ಷ ನೀಡುವುದಾಗಿ, ಇನ್ನೆರಡು ದಿನದಲ್ಲಿ ಒಂದು ಲಕ್ಷ ನೀಡುವುದಾಗಿ ಭರವಸೆ ನೀಡಿದ ನಂತರ ಮೃತ ದೇಹವನ್ನು ತೆಗೆಯಲಾಯಿತು.

ಕಳೆದ ಎರೆಡು ವರ್ಷದ ಹಿಂದೆ ಆಲೂರು ಸಿದ್ದಾಪುರ ಸಮೀಪದ ಸಂಗೈನಪುರದ ಯುವತಿಯನ್ನು ರಘು ವಿವಾಹವಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News