ಹಾಸನ: ನಗರಸಭೆ ಸದಸ್ಯನ ಬರ್ಬರ ಹತ್ಯೆ

Update: 2022-06-01 17:33 GMT
 ಪ್ರಶಾಂತ್

ಹಾಸನ: ಹಾಸನ ನಗರಸಭೆ ಸದಸ್ಯ ಓರ್ವನನ್ನು ದುಷ್ಕರ್ಮಿಗಳ ತಂಡವೊಂದು ಹತ್ಯೆ ನಡೆಸಿದೆ. 

ಹತ್ಯೆಗೀಡಾದ ಯುವಕನನ್ನು ಮಾಜಿ ನಗರಸಭೆ ಸದಸ್ಯ ಹಾ.ರಾ ನಾಗರಾಜ್ ಅವರ ಪುತ್ರ ಪ್ರಶಾಂತ್ ಎಂದು ಗುರುತಿಸಲಾಗಿದೆ. 

ಹಾಸನ ನಗರದ ಜವೇನಹಳ್ಳಿ ಮಠದ ಬಳಿ  ಘಟನೆ ನಡೆದಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಹೋಗಿರುವ ದುಷ್ಕರ್ಮಿಗಳ ತಂಡವು ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆಸಿದೆ ಎಂದು ಹೇಳಲಾಗತ್ತಿದೆ.

ಹಾಸನ ನಗರದ 16 ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಶಾಂತ್ ನಗರಸಭೆಗೆ ಆಯ್ಕೆಯಾಗಿದ್ದರು.

ಪ್ರಶಾಂತ್ ತಂದೆ ಹಾ ರಾ ನಾಗರಾಜ್ ಸಹ ಈ ಹಿಂದೆ ನಗರದಲ್ಲಿ ಹತ್ಯೆ ಯಾಗಿದ್ದರು. ತಂದೆಯ ಹತ್ಯೆಗೈದ ಅರೋಪಿ ಗ್ಯಾರಳ್ಳಿ ತಮ್ಮಯ್ಯ ಹತ್ಯೆ ಅರೋಪ ಪ್ರಶಾಂತ್ ಮೇಲಿತ್ತು ಎಂದು ತಿಳಿದು ಬಂದಿದೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News