VIDEO- ಬಸವಣ್ಣನವರ ಕುರಿತು ವಾಸ್ತವ ವಿಚಾರವೇನಿದೆ ಅದನ್ನು ಮಾತ್ರ ಪಠ್ಯದಲ್ಲಿ ಸೇರಿಸಿ: ಸಿದ್ಧಲಿಂಗ ಸ್ವಾಮೀಜಿ

Update: 2022-06-03 13:50 GMT

ದಾವಣಗೆರೆ.ಜೂ.3; ಪಠ್ಯಪುಸ್ತಕದ ವಿಷಯ ಈಗಾಗಲೇ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ.ಯಾವುದೇ ಕಾರಣದಿಂದ ಇಂತಹ ವಾತಾವರಣ ಸೃಷ್ಟಿ ಆಗಬಾರದು ಎಂದು ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ನೈತಿಕ ಶಿಕ್ಷಣ ಅತ್ಯಂತ ಅಗತ್ಯ ಬೇಕಾಗಿದೆ. ಪಠ್ಯಪುಸ್ತಕದಲ್ಲಿ ನೈತಿಕ ಕೊರತೆ ಹೆಚ್ಚು ಕಾಣುತ್ತಿದೆ. ಮೂಲ ವಿಚಾರವನ್ನು ತಿದ್ದದೆ ವಾಸ್ತವವಾಗಿ ಕೊಡಬೇಕು.

ವಾದ ವಿವಾದಗಳು ಪೂರ್ಣಗೊಂಡು ಶಾಂತಿ ವಾತವರಣ ನಿರ್ಮಾಣ ಆಗಬೇಕು.ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟಾಗಬೇಕು ಎಂದರು.ಬಸವಣ್ಣನವರು ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ.ಬಸವಣ್ಣನವರ ತತ್ವಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿದ್ದು ಅವರ ವಚನಗಳೇ ನಮಗೆ ಆಧಾರ ಆಗಿದ್ದು  ಆದ್ದರಿಂದ ಅದನ್ನು ತಿರುಚುವ ಪ್ರಯತ್ನ ಮಾಡಬಾರದು. ವಾಸ್ತವ ವಿಚಾರಗಳನ್ನ ಪ್ರಕಟ ಮಾಡುವುದು ಒಳ್ಳೆಯದು. ಬಸವಣ್ಣ ಮಾನವ ಬದುಕಿಗೆ ಬೇಕಾದ ತತ್ಚವನ್ನು ಕೊಟ್ಟಿದ್ದಾರೆ.

ಬಸವಣ್ಣನ ವಚನಗಳನ್ನು ಯಾರಿಂದಲೂ ತಿದ್ದಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅದು ಅಪಚಾರವಾಗುತ್ತದೆ. ವಾಸ್ತವ ವಿಚಾರವೇನಿದೆ ಅದನ್ನು ಮಾತ್ರ ಪಠ್ಯದಲ್ಲಿ ಸೇರಿಸಬೇಕು. ಬಸವಣ್ಣ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಆರ್ಥಿಕ, ಸಾಮಾಜಿಕ,

ರಾಜಕೀಯವಾಗಿ ಎಲ್ಲಾ ಕ್ಷೇತ್ರಕ್ಕೂ ಬೇಕಾದಂತಹ ಮಾರ್ಗದರ್ಶನ ನೀಡಿದ್ದಾರೆ. ಬಸವಣ್ಣನ ತತ್ವಗಳು ಪ್ರತಿಯೊಬ್ಬರಿಗೂ ಬೇಕಾದಂತಹವು ಎಂದು ತಿಳಿಸಿದರು.

ನಮ್ಮನ ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಬಸವಣ್ಣನವರಿಗೆ ಕೊಡುವ ಗೌರವವಾಗಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News