''ಸಿದ್ದರಾಮಯ್ಯ ಮತ್ತೆ ಪಕ್ಷಾಂತರಕ್ಕೆ ಮುಂದಾಗಿದ್ದಾರಾ? ಈ ಬಾರಿ ಪ್ರಯಾಣ ಎತ್ತ?'': ಬಿಜೆಪಿ
ಬೆಂಗಳೂರು: 'ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗ ಕಾಂಗ್ರೆಸ್ ಪಕ್ಷವೂ ಅಪಥ್ಯವಾಗುತ್ತಿದೆ' ಎಂದು ಬಿಜೆಪಿ ಹೇಳಿದೆ.
ಈ ಸಂಬಂಧ ಸಿದ್ದರಾಮಯ್ಯ ಅವರು ಸಭೆಯೊಂದರಲ್ಲಿ ಮಾತನಾಡುತ್ತಿರುವ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ, ತನ್ನದೇ ಪಕ್ಷದ ಶಾಸಕರು ಮತ್ತು ಮುಖಂಡರ ಕಾರ್ಯ ವೈಖರಿ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರರ್ಥ ವೇನು, ಸಿದ್ದರಾಮಯ್ಯ ಮತ್ತೆ ಪಕ್ಷಾಂತರಕ್ಕೆ ಮುಂದಾಗಿದ್ದಾರಾ?' ಎಂದು ಪ್ರಶ್ನೆ ಮಾಡಿದೆ.
''ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಕೈ ತಪ್ಪುತ್ತಿದೆ ಎಂಬುದು ಸಿದ್ದರಾಮಯ್ಯ ಅವರಿಗೆ ಮನವರಿಕೆಯಾಗುತ್ತಿದೆ. ಹೀಗಾಗಿ ತಮಗೆ ಎಲ್ಲವನ್ನೂ ನೀಡಿದ ಕಾಂಗ್ರೆಸ್ ಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ, ಈ ಬಾರಿ ನಿಮ್ಮ ಪ್ರಯಾಣ ಎತ್ತ?'' ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸಿದ್ದರಾಮಯ್ಯ ಅವರಿಗೆ ಈಗ ಕಾಂಗ್ರೆಸ್ ಪಕ್ಷವೂ ಅಪಥ್ಯವಾಗುತ್ತಿದೆ.
— BJP Karnataka (@BJP4Karnataka) June 9, 2022
ತನ್ನದೇ ಪಕ್ಷದ ಶಾಸಕರು ಮತ್ತು ಮುಖಂಡರ ಕಾರ್ಯ ವೈಖರಿ ಬಗ್ಗೆ @siddaramaiah ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದರರ್ಥ ವೇನು, ಸಿದ್ದರಾಮಯ್ಯ ಮತ್ತೆ ಪಕ್ಷಾಂತರಕ್ಕೆ ಮುಂದಾಗಿದ್ದಾರಾ?#ಅವಕಾಶವಾದಿಸಿದ್ದರಾಮಯ್ಯ pic.twitter.com/1AxsrSKhYJ