VIDEO- ಆಪ್ತರೊಂದಿಗೆ ಮೈಸೂರಿನ ಕಲಾಮಂದಿರದಲ್ಲಿ 'ಕುರುಕ್ಷೇತ್ರ' ನಾಟಕ ವೀಕ್ಷಿಸಿದ ಸಿದ್ದರಾಮಯ್ಯ
Update: 2022-06-11 13:09 GMT
ಮೈಸೂರು: ನಗರದ ಕಲಾ ಮಂದಿರಲ್ಲಿ ಮೈಸೂರು ವಕೀಲರ ಸಂಘ ಆಯೋಜಿಸಿದ್ದ ಕುರುಕ್ಷೇತ್ರ ನಾಟಕವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವೀಕ್ಷಿಸಿದರು.
ಬೆಂಗಳೂರಿನಿಂದ ಶನಿವಾರ ಮಧ್ಯಾಹ್ನ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ನೇರವಾಗಿ ಕಲಾಮಂದಿರಕ್ಕೆ ಆಗಮಿಸಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ವಾಸು ಜೊತೆಗೂಡಿ ನಾಟಕ ನೋಡಿ ಸಂತಸಪಟ್ಟರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಇದೇ ವೇಳೆ ಕಾಂಗ್ರಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರ ಪರ ವಕೀಲರಲ್ಲಿ ಮತಯಾಚಿಸಿದರು.