ರಾಜ್ಯಸಭಾ ಚುನಾವಣೆ ಪಲಿತಾಂಶ; ಕಾಂಗ್ರೆಸ್-ಜೆಡಿಎಸ್ ಹೊಣೆಗೇಡಿತನವೆ ಬಿಜೆಪಿ ಗೆಲುವಿಗೆ ಕಾರಣ: ಸಿಪಿಎಂ

Update: 2022-06-11 13:19 GMT

ಬೆಂಗಳೂರು, ಜೂ. 11: ‘ರಾಜ್ಯಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಹಾಗೂ ಸೌಹಾರ್ದತೆಯ ಕುರಿತು, ಕಾಂಗ್ರೆಸ್ ಮತ್ತು ಜೆಡಿಎಸ್ ತಮಗೆ ಯಾವುದೇ ರೀತಿಯ ಹೊಣೆಗಾರಿಕೆಯಿಲ್ಲ ಎಂದು, ಜವಾಬ್ದಾರಿ ಹೀನ, ಸಂಕುಚಿತ ಅಧಿಕಾರದಾಹಿ ರಾಜಕಾರಣಕ್ಕೆ ಅಂಟಿಕೊಂಡಿದ್ದೆ ಬಿಜೆಪಿ ಗೆಲ್ಲಲು ಕಾರಣವಾಗಿದೆ' ಎಂದು ಸಿಪಿಎಂ ಆರೋಪಿಸಿದೆ.

ಶನಿವಾರ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಪತ್ರಿಕಾ ಹೇಳಿಕೆ ನೀಡಿದ್ದು, ‘ಬಿಜೆಪಿ ಗೆಲುವಿನಿಂದ ಮತ್ತು ಕಾಂಗ್ರೆಸ್-ಜೆಡಿಎಸ್‍ನ ಹೊಣೆಗೇಡಿ ರಾಜಕಾರಣದಿಂದ ಜನತೆಯನ್ನು ಆತಂಕಕ್ಕೀಡಾಗುವಂತಾಗಿದೆ. ರಾಜ್ಯ ಹಾಗೂ ಒಕ್ಕೂಟ ಸರಕಾರಗಳ ಮತ್ತು ಬಿಜೆಪಿ ಹಾಗೂ ಆರೆಸ್ಸೆಸ್ ಸರ್ವಾಧಿಕಾರ, ಜನ ವಿರೋಧಿ ನೀತಿಗಳು ಮತ್ತು ಕೋಮುವಾದವು ರಾಜ್ಯದ ಜನತೆಯಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿರುವಾಗ, ಜಾತ್ಯತೀತ ಶಕ್ತಿಗಳು ಜವಾಬ್ದಾರಿಯುತವಾಗಿ, ಜನತೆಯ ಆತಂಕ ನಿವಾರಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News