ಬಿಹಾರದಲ್ಲಿ ಚಿಕ್ಕಮಗಳೂರಿನ ಯೋಧನ ಮೃತದೇಹ ಪತ್ತೆ

Update: 2022-06-12 13:45 GMT
ಮೃತ ಯೋಧ ಎಂ.ಎನ್.ಗಣೇಶ್

ಚಿಕ್ಕಮಗಳೂರು, ಜೂ.12: ಭಾರತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಮಸಿಗದ್ದೆ ಗ್ರಾಮದ ಯೋಧ ಎಂ.ಎನ್.ಗಣೇಶ್ (36) ಅವರ ಮೃತದೇಹ ಬಿಹಾರ ರಾಜ್ಯದ ಕಿಶನ್‍ಗಂಜ್ ಪ್ರದೇಶದಲ್ಲಿ ಪತ್ತೆಯಾಗಿದೆ.

ಗಣೇಶ ಅವರು ಅಸ್ಸಾಂ ಗುವಾಹಟಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎ.24ರಂದು ಸ್ವಗ್ರಾಮಕ್ಕೆ ಬಂದಿದ್ದ ಅವರು ಜೂ.9ರಂದು ಮತ್ತೆ ಕರ್ತವ್ಯಕ್ಕೆ ಮರಳಿದ್ದರು. ರವಿವಾರ ಮುಂಜಾನೆ ಅಂಬುಲೆನ್ಸ್ ಸಿಬ್ಬಂದಿಯೊಬ್ಬರು ಕಿಶನ್‍ಗಂಜ್‍ನಲ್ಲಿ ರಸ್ತೆ ಬದಿ ಗಣೇಶ್ ಅವರ ಶವ ಪತ್ತೆಯಾಗಿರುವುದನ್ನು ಕಂಡಿದ್ದಾರೆ ಎಂದು ತಿಳಿದು ಬಂದಿದೆ. ಯೋಧ ಗಣೇಶ್ ಅವರು ಮಸಿಗದ್ದೆ ಕೂಲಿಕಾರ ನಾಗಯ್ಯ ಮತ್ತು ಗಂಗಮ್ಮ ದಂಪತಿ ಪುತ್ರನಾಗಿದ್ದು, ಪಿಯುಸಿ ವಿದ್ಯಾಭ್ಯಾಸ ಮಾಡಿದ್ದರು. 

14 ವರ್ಷಗಳಿಂದ ಸೇನೆಯಲ್ಲಿದ್ದರು. ರಾಜಸ್ತಾನ, ದಿಲ್ಲಿ, ಗೋವಾ ಜಮ್ಮುವಿನಲ್ಲಿ ಕಾರ್ಯನಿರ್ವಹಿಸಿದ್ದರು. ಯೋಧ ಗಣೇಶ್ ಅವರು ಪತ್ನಿ ಶ್ವೇತಾ ಹಾಗೂ ಪತ್ರಿ ಆದ್ಯಾ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News