ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಶಾಸಕ ಅಪ್ಪಚ್ಚು ರಂಜನ್: ಕೊಡಗಿನ ರಸ್ತೆ ಮೇಲ್ದರ್ಜೆಗೆ ಒಪ್ಪಿಗೆ

Update: 2022-06-13 11:19 GMT

ಮಡಿಕೇರಿ ಜೂ.13 : ಕೊಡಗಿಗೆ ಆಗಮಿಸಿರುವ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿಯವರನ್ನು ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ಮಾಡಿ ಮಾತುಕತೆ ನಡೆಸಿದರು. 

ಮಡಿಕೇರಿಯ ತಾಜ್ ರೆಸಾರ್ಟ್ ನಲ್ಲಿ ಭೇಟಿಯಾಗಿ ಚೆನ್ನರಾಯಪಟ್ಟಣ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ದ್ವಿಪದರ ರಸ್ತೆಯನ್ನಾಗಿ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸ್ಪಂದಿಸಿದ ಸಚಿವರು,  ರಸ್ತೆಯನ್ನು ನ್ಯಾಶನಲ್ ಹೈವೆಯಾಗಿ ಮಾರ್ಪಡಿಸಲು  ಒಪ್ಪಿಗೆ ಸೂಚಿಸಿದರು. ಅಲ್ಲದೆ  ಸಚಿವರ ಖಾತೆಯಲ್ಲಿ ಪ್ರವಾಸೋದ್ಯಮಕ್ಕೆ  ಸಂಬಂಧಿಸಿದಂತೆ  ಕೇಬಲ್ ಕಾರ್ ಮಾಡುವ ಅವಕಾಶವಿದ್ದು, ಕೂಡಲೇ ಅಂದಾಜು ಪಟ್ಟಿ ಸಲ್ಲಿಸಿದ್ದಲ್ಲಿ ಜಿಲ್ಲೆಗೆ ಕೇಬಲ್ ಕಾರ್ ಮಂಜೂರು ಮಾಡಿಕೊಡುವುದಾಗಿ ತಿಳಿಸಿದರು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News