ನಮಗೆ ಬೈದ ಮಾತ್ರಕ್ಕೆ ಗುಬ್ಬಿ ಶ್ರೀನಿವಾಸ್ ದೊಡ್ಡವರಾಗಲ್ಲ: ಸಂಸದ ಪ್ರಜ್ವಲ್ ರೇವಣ್ಣ

Update: 2022-06-13 18:01 GMT

ಹಾಸನ: ನಮಗೆ ಬೈದ ಮಾತ್ರಕ್ಕೆ ಗುಬ್ಬಿ ಶ್ರೀನಿವಾಸ್ ದೊಡ್ಡವರಾಗುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. 

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ನಗರದ ಸರಕಾರಿ ಕಲಾ ಕಾಲೇಜು, ಶ್ರೀ ಗಂಧದ ಕೋಠಿ ಆವರಣದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಹಾಕಲು ಮತದಾರರಲ್ಲಿ ಮನವಿ ಮಾಡುತ್ತಿದ್ದ ಸಂಸದರು ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು.

ನಮಗೆ ಬೈದ ಮಾತ್ರಕ್ಕೆ ಗುಬ್ಬಿ ಶ್ರೀನಿವಾಸ್ ದೊಡ್ಡವರಾಗಲ್ಲ. ಗುಬ್ಬಿ ಶ್ರೀನಿವಾಸ್ ಬಗ್ಗೆ ನಾನು ಮಾತನಾಡುವುದಿಲ್ಲ. ಯಾರು ಅವಹೇಳನಕಾರಿಯಾಗಿ ಮಾತನಾಡಬಾರದು. ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು ಜನಗಳು ನಮ್ಮನ್ನು ಗಮನಿಸುತ್ತಿರುತ್ತಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಇದುವರೆಗೂ ಗುಬ್ಬಿ ಶ್ರೀನಿವಾಸ್ ಬಹಿರಂಗವಾಗಿ ಪಕ್ಷವಿರೋಧಿ ಚಟುವಟಿಕೆ ತೋರಿಸಿರಲಿಲ್ಲ. ಈಗ ಪಕ್ಷದಿಂದ ನೊಟೀಸ್ ಜಾರಿ ಮಾಡಿದೆ. ಕೋರ್ ಕಮಿಟಿ ಅವರ ಬಗ್ಗೆ ಡಿಸಿಷನ್ ತೆಗೆದುಕೊಳ್ಳಲಿದೆ ಎಂದು ಹೇಳಿದರು.

''ಈಗಾಗಲೇ ಮೂರು ತಾಲೂಕು ಭೇಟಿ ನೀಡಿ ಮತದಾನ ವಿಕ್ಷಣೆ ಮಾಡಿದ್ದೆನೆ. ಎಲ್ಲಾ ಕಡೆ ನಮ್ಮ ಅಭ್ಯರ್ಥಿ ಪರ ಉತ್ತಮ ಮತದಾನವಾಗಿದೆ. ಎಲ್ಲಾರು ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ ಹೆಚ್.ಕೆ. ರಾಮು ಖಂಡಿತವಾಗಿ ಗೆದ್ದೆ ಗೆಲ್ಲುತ್ತಾರೆ. .ಪ್ರತಿಸ್ಪರ್ಧಿ ಬಗ್ಗೆ ನಾನು ಲೆಕೆಡಿಸಕೊಂಡಿರುವುದಿಲ್ಲ ಎಂದರು. 

ದಕ್ಷಿಣ ಪದವೀಧರರ ಚುನಾವಣೆ ಫಲಿತಾಂಶ ಹಳೆ ಮೈಸೂರು ಪ್ರಾಂತ್ಯಕ್ಕೆ ಒಳ್ಳೆಯ ಸಂದೇಶವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಜೆಡಿಎಸ್ ಮುಖಂಡ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್, ಎಸ್ ದ್ಯಾವೇಗೌಡ, ರಘುಗೌಡ, ಜಯರಾಂ, ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News