ಪೊನ್ನಂಪೇಟೆ; ಪಂಚಾಯತ್ ರಾಜ್ ಇಂಜಿನಿಯರ್ ಎಸಿಬಿ ಬಲೆಗೆ

Update: 2022-06-17 12:12 GMT

ಮಡಿಕೇರಿ ಜೂ.17 : ಪೊನ್ನಂಪೇಟೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ  ಸಹಾಯಕ ಅಭಿಯಂತರ ಓಬಯ್ಯ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ.

ಎಸಿಬಿ ಅಧಿಕಾರಿಗಳಾದ ಚಿತ್ತರಂಜನ್ ದಾಸ್ ನೇತೃತ್ವದ ಎಂಟು ಮಂದಿಯ ತಂಡ ಏಕ ಕಾಲಕ್ಕೆ ಪೊನ್ನಂಪೇಟೆ ಪಂಚಾಯತ್ ರಾಜ್ ಉಪ ವಿಭಾಗದ ಕಛೇರಿ ಮತ್ತು ಹುಣಸೂರಿನಲ್ಲಿರುವ ಓಬಯ್ಯ ಅವರ ಮನೆಗೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.

ಕಳೆದ ಎಂಟು ವರ್ಷಗಳಿಂದ ಪೊನ್ನಂಪೇಟೆ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಅಭಿಯಂತರರಾಗಿ ಓಬಯ್ಯ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಬೆಳಗ್ಗೆ ಕಛೇರಿ ಮತ್ತು ಹುಣಸೂರಿನ ಮನೆಗೆ ಎಸಿಬಿ ದಾಳಿ ನಡೆಸಿ ಓಬಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಕಡತಗಳನ್ನು ಎಸಿಬಿ ತಂಡ ಪರಿಶೀಲಿಸುತ್ತಿರುವುದಾಗಿ ವರದಿಯಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News