ಹೊಳೆನರಸೀಪುರ ತಾಲೂಕಿನಲ್ಲಿ ಭೂಕಂಪನದ ಅನುಭವ

Update: 2022-06-23 15:17 GMT

ಹೊಳೆನರಸೀಪುರ : ಜೂ ,23: ಪಟ್ಟಣ ಮತ್ತು  ಹಳ್ಳಿಮೈಸೂರು ಹೋಬಳಿಯ ಕೆಲ ಗ್ರಾಮಗಳಲ್ಲಿ  ಭೂಮಿ ಕಂಪನವಾದ  ಅನುಭವವಾಗಿದೆ .  

ಕಂಪನವಾದ   ಅನುಭವದಿಂದ ಗ್ರಾಮಸ್ಥರು ಮನೆಯಿಂದ ಹೊರಬಂದು ಆತಂಕ ಪಟ್ಟಿದ್ದಾರೆ.  ರಸ್ತೆ ಹಾಗೂ ಕೆಲ ಮನೆಗಳು ಬಿರುಕು ಬಿಟ್ಟಿದ್ದು   ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇಂದು ಮುಂಜಾನೆ 4:30ರ ಸುಮಾರಿಗೆ ಭೂಮಿ ಕಂಪನವಾಗಿದ್ದು, 10 ಸೆಕೆಂಡ್  ಭೂಮಿ ಕಂಪಿಸಿದ ಹಿನ್ನೆಲೆ ಮನೆಯಲಿದ್ದ ಪಾತ್ರಗಳು ಹಾಗೂ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

ಹೊಳೆನರಸೀಪುರ ತಾಲೂಕಿನಲ್ಲಿ ಕಂಪಿಸಿದ ಭೂಮಿ ಬೆಟ್ಟ ಸಾತನಹಳ್ಳಿ, ಹಳ್ಳಿಮೈಸೂರು, ಕಲ್ಲಹಳ್ಳಿ, ದಾಳ ಗೌಡನಹಳ್ಳಿ, ದೊಡ್ಡ ಕಾಡನೂರು, ಪೂಜೆ ಕೊಪ್ಪಲು,  ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಚಿಟ್ಟನಹಳ್ಳಿ ಬಡಾವಣೆ , ನರಸಿಂಹನಾಯಕ ನಗರ ನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ತಾಲೂಕಿನಾದ್ಯಂತ ಭೂಮಿ ಕಂಪಿಸಿದ ಅನುಭವವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News