ಶಿವಮೊಗ್ಗ: ನೀರು ಪಾಲಾದ ಬಾಲಕನ ಮೃತದೇಹ ಪತ್ತೆ

Update: 2022-06-25 14:53 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಸೂಳೆಬೈಲು ಸಮೀಪದ ತುಂಗಾನದಿಯಲ್ಲಿಬಿದ್ದಿದ್ದ ಬಾಲಕನೊಬ್ಬನ ಶವವು ಎರಡು ದಿನಗಳ ನಂತರ ಪತ್ತೆಯಾಗಿದ್ದು, ತುಂಗಾನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಸೂಳೆಬೈಲು ನಿವಾಸಿ ರಿಯಾನ್‌(16) ಶವವಾಗಿ ಪತ್ತೆಯಾದ ಬಾಲಕ ಎಂದು ತಿಳಿದು ಬಂದಿದೆ.

ಗುರುವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಸ್ನೇಹಿತರೊಂದಿಗೆ ಸ್ನಾನ ಮಾಡುವುದಕ್ಕಾಗಿ ತೆರಳಿದ್ದ ಈತ ನೀರಿನಲ್ಲಿಬಿದ್ದಿದ್ದ ಎನ್ನಲಾಗಿದೆ.

ಸತತ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ಬೆಳಗ್ಗೆಯಿಂದಲೇ ಶೋಧ ಕಾರ್ಯ ನಡೆಸಿದ್ದು, ಮಧ್ಯಾಹ್ನ ಹೊತ್ತಿಗೆ ಶವ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News