ಚಿಕ್ಕಮಗಳೂರು: ಗೋಮಾಂಸ ಮಾರಾಟಗಾರರ ಪರೇಡ್

Update: 2022-06-28 05:04 GMT

ಚಿಕ್ಕಮಗಳೂರು, ಜೂ.28: ಚಿಕ್ಕಮಗಳೂರು ನಗರದಲ್ಲಿ ಗೋಮಾಂಸ ಮಾರಾಟಗಾರರ ಪರೇಡ್ ನಡೆಸಿದ ಪೊಲೀಸರು ಅಕ್ರಮ ಗೋಮಾಂಸ ಮಾರಾಟಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪರೇಡ್ ನಲ್ಲಿ 30 ಮಂದಿ ಗೋಮಾಂಸ ಮಾರಾಟಗಾರರ ಭಾಗವಹಿಸಿದ್ದರು.

ಚಿಕ್ಕಮಗಳೂರು ನಗರ ಸಭೆಯಿಂದಲೂ ಗೋಮಾಂಸ ಅಡ್ಡೆಗಳ ಮೇಲೆ‌ ಇತ್ತೀಚೆಗೆ ದಾಳಿ ನಡೆಸಿ ಅಕ್ರಮ ಅಡ್ಡೆಗಳನ್ನು ಬುಲ್ಡೋಝರ್ ಬಳಸಿ ತೆರವುಗೊಳಿಸಿತ್ತು. ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಿದರೆ ಅಂಗಡಿ-ಮನೆಗಳನ್ನ ತೆರವು ಮಾಡುವುದಾಗಿ 10ಕ್ಕೂ ಹೆಚ್ಚು ಗೋ ಮಾಂಸ ಮಾರಾಟಗಾರರ ಮನೆಗಳಿಗೆ ನಗರಸಭೆ ನೋಟಿಸ್ ‌ಅಂಟಿಸಿತ್ತು. ಈ ನಡುವೆ ಇಂದು ಗೋಮಾಂಸ ಮಾರಾಟಗಾರರ ಪರೇಡ್ ನಡೆಸಿ ಅಕ್ರಮ ದಂಧೆ ಕುರಿತಂತೆ ಪೊಲೀಸ್ ಇಲಾಖೆ ಕಠಿಣ ಸೂಚನೆ  ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News