'ಅಗ್ನಿಪಥ್' ಬಿಜೆಪಿಗರ ಅಜ್ಞಾನದ ಕೂಸು: ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ

Update: 2022-06-28 06:59 GMT

ಬೆಂಗಳೂರು: ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಯೋಜನೆ ಬಿಜೆಪಿಗರ ಅಜ್ಞಾನದ ಕೂಸು ಎಂದು ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೇಳಿದ್ದಾರೆ. 

 ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಎಚ್.ಸಿ ಮಹದೇವಪ್ಪ, ಯುವಕರ ದೇಶಪ್ರೇಮವು 4 ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂಬ ಬಿಜೆಪಿಗರ ಅಜ್ಞಾನದ ಕೂಸೇ ಈ ಅಗ್ನಿಪಥ್ ಯೋಜನೆ. ಸೇನೆಯ ಘನತೆ, ಗಾಂಭೀರ್ಯ ಮತ್ತು ಅದರ ಗಟ್ಟಿಯಾದ ವ್ಯವಸ್ಥೆಯನ್ನು ಹಾಳು ಮಾಡುವುದಕ್ಕೆ ಇದಕ್ಕಿಂತ ಉತ್ತಮ ಮಾರ್ಗವಿದೆಯೇ?  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಇಂತಹ ಮೂರ್ಖತನವನ್ನು ಮೋದಿಯ ಮಾಸ್ಟರ್ ಸ್ಟ್ರೋಕ್ ಎನ್ನಬಹುದೇ?' ಎಂದೂ ಅವರು ಇನ್ನೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ... ಮುಂದುವರಿದ ಪ್ರತಿಭಟನೆ; ಅಗ್ನಿಪಥ್ ಯೋಜನೆ ಹಿಂಪಡೆಯಲು ಪಟ್ಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News