ದಾವಣಗೆರೆ | ಪಬ್ಲಿಕ್ ಟಿವಿಯಲ್ಲಿ ಸಿದ್ದರಾಮಯ್ಯ, ಡಿಕೆಶಿಗೆ ಕೊಲೆ ಬೆದರಿಕೆ; ಯುವ ಕಾಂಗ್ರೆಸ್ ನಿಂದ ದೂರು

Update: 2022-07-01 15:14 GMT

ದಾವಣಗೆರೆ : ಪಬ್ಲಿಕ್ ವಾಹಿನಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕೊಲೆ ಮಾಡಬೇಕು ಎನ್ನುವ ಹೇಳಿಕೆ ನೀಡಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ದೂರು ನೀಡಿದರು.

ಈಚೆಗೆ ಖಾಸಗಿ ವಾಹನಿ ಪಬ್ಲಿಕ್ ಟಿವಿಯಲ್ಲಿ ಚರ್ಚೆ ವೇಳೆ ವೀರಣ್ಣ ವ್ಯಕ್ತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರನ್ನು ಮೊದಲು ಗುಂಡಕ್ಕಿ ಕೊಲ್ಲಬೇಕು ಎನ್ನುವ ಪ್ರಚೋದನೆಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಅದ್ದರಿಂದ ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೆಕು ಎಂದು ಒತ್ತಾಯಿಸಿದರು.

ಈ ವೇಳೆ  ಸಿದ್ದೇಶ್. ವೈ, ಮಂಜುನಾಥ .ಎಂ ,ಆರ್  ಮಾಯಕೊಂಡ ಮೈನಾರಿಟಿ ಬ್ಲಾಕ್ ಅಧ್ಯಕ್ಷ  ಸುಹೀಲ್,  .ಹರೀಶ್ ಎಚ್  ಆರ್ ,  ನಾಸಿರ್, ಸದ್ದಾಂ,  ಶಿವಣ್ಣ ಇತರರು ಇದ್ದರು.

ವೀರಣ್ಣ ಅವರು ಹೇಳಿದ್ದು ಏನು? 

'ಮುಸಲ್ಮಾನರಿಗೆ ಯಾವುದೇ ರೀತಿಯ ಬೆಂಬಲ ಕೊಡಬಾರದು. ಪಬ್ಲಿಕ್‌ ಟಿ.ವಿ.ಗೆ ಮುಸಲ್ಮಾರನ್ನು ಕರೆಸಿ ಇದು ಮಾಡುತ್ತೀರಲ್ಲ, ಅದನ್ನು ಬಿಡಬೇಕು ಸರ್...  ಅವರಿಗೆ ಸ್ಥಾನ ಮಾನ ಕೊಡಬಾರದು. ಅವರಿಗೆ ಭಾರತ ದೇಶದಲ್ಲಿ ಯಾವುದೇ ಸ್ಥಾನಮಾನ ಕೊಡಬಾರದು. ಅನ್ನ ಹಾಕುವುದು ನಾವು ನೀರು ಹಾಕಿರುವವರು ನಾವು. ನಮ್ಮಮೇಲೆಯೇ ಬಾಲ ಬಿಚ್ಚುತ್ತಿದ್ದಾರಲ್ವಾ? ಎಷ್ಟು ಪೊಗರು ಸರ್ ಅವರಿಗೆ... ಫಸ್ಟ್‌ ಆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಗುಂಡಿಕ್ಕಿ ಹೊಡೆದರೆ ಇವರೆಲ್ಲ ಸುಮ್ಮನಾಗುತ್ತಾರೆ' ಎಂದು ವೀರಣ್ಣ ವಿಷಕಾರಿ ಮಾತುಗಳನ್ನಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News