ವಿದ್ಯುತ್ ಅವಘಡ: ಇಬ್ಬರು ಸ್ಥಳದಲ್ಲೇ ಮೃತ್ಯು

Update: 2022-07-09 15:22 GMT

ಮಂಡ್ಯ, ಜು.9: ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಕೆಆರ್‍ ಎಸ್ ಸಮೀಪದ ಡಿ ಪಾಲ್ ಸ್ಕೂಲ್ ಬಳಿ ನಡೆದಿದೆ. 

ವಿದ್ಯುತ್ ಸಂಪರ್ಕ ಗುತ್ತಿಗೆದಾರ ಉಮೇಶ್(35) ಹಾಗೂ ಕಾರ್ಮಿಕ ಶಂಕರಾಚಾರಿ(55) ಮೃತರು ಎಂದು ತಿಳಿದು ಬಂದಿದೆ.  

ಖಾಸಗಿ ಕಂಪನಿಯ ಕೊಳವೆಬಾವಿ (ಬೋರ್ವೆಲ್) ಪ್ಲಾಂಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದ್ದು, ಕೆಆರ್ ಎಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News