ಜಗಳೂರು | ಕೆಸಿಎಫ್ ಒಮಾನ್ ಪ್ರಾಯೋಜಕತ್ವದ 'ಮಾಝಿನ್ ಹೆರಿಟೇಜ್' ಉದ್ಘಾಟನೆ
ದಾವಣಗೆರೆ, ಜು.15: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಒಮಾನ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ಇಹ್ಸಾನ್ ಕರ್ನಾಟಕ ಎಜು ಆ್ಯಂಡ್ ಚಾರಿಟೇಬಲ್ ಟ್ರಸ್ಟ್, ದಾರುಲ್ ಉಲೂಮ್ ಇಹ್ಸಾನಿಯ್ಯ ಇದರ 'ಮಾಝಿನ್ ಹೆರಿಟೇಜ್' ಕಟ್ಟಡದ ಉದ್ಘಾಟನೆ ಸಮಾರಂಭ ಜು.13ರಂದು ಜಗಳೂರಿನಲ್ಲಿ ಜರುಗಿತು.
ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ ಕಟ್ಟೆ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಉದ್ಘಾಟಿಸಿದರು. ಸೈಯದ್ ಸೈಫುದ್ದೀನ್ ಅಲ್ ಹೈದ್ರೋಸಿ ತಂಙಳ್ ಕೊಡಗು ದುಆಗೈದರು. ಇಹ್ಸಾನ್ ಕರ್ನಾಟಕದ ಅಧ್ಯಕ್ಷ ಎಂ.ಐ.ಅಬ್ದುಲ್ ಹಫೀಲ್ ಸಅದಿ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ನೂತನ ಕಟ್ಟಡದಲ್ಲಿ ನಡೆದ ಮಹ್ಲರತುಲ್ ಬದ್ರಿಯ ಮಜ್ಲಿಸ್ ಒಮಾನ್ ಇಮಾಮ್ ನವವಿ ಮದ್ರಸ ಪ್ರಾಂಶುಪಾಲ ಎಂ.ಎಸ್. ಉಬೈದುಲ್ಲ ಸಖಾಫಿ ನೇತೃತ್ವದಲ್ಲಿ ನಡೆಯಿತು.
ಅತಿಥಿಗಳಾಗಿ ಭಾಗವಹಿಸಿದ್ದ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಯ್ಯೂಬ್ ಕೋಡಿ, ಎಸ್.ವೈ.ಎಸ್. ರಾಜ್ಯಾಧ್ಯಾಕ್ಷ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ, ಶಾಸಕ ಎಸ್.ವಿ.ರಾಮಚಂದ್ರ, ಜಗಳೂರಿನ ನವ ಚೇತನ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಅರವಿಂದನ್, ಇಹ್ಸಾನ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ, ಸಮಾಜ ಸೇವಕರಾದ ದೇವೇಂದ್ರಪ್ಪ ಬಿ. ಜಗಳೂರು ಮಾತನಾಡಿ ಶಭ ಹಾರೈಸಿದರು.
ವೇದಿಕೆಯಲ್ಲಿ ಜಗಳೂರು ಪಟ್ಟಣ ಪಂಚಾಯತ್ ಅಧ್ಯಕ್ಷ ಎಸ್ ಸಿದ್ದಪ್ಪ, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಮಾಝಿನ್ ಹೆರಿಟೇಜ್ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಇಕ್ಬಾಲ್ ಬೊಲ್ಮಾರ್ ಬರ್ಕ, ಕನ್ವೀನರ್ ಸೈಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಕೊಡಗು, ಕೆಸಿಎಫ್ ಒಮಾನ್ ಕೋಶಾಧಿಕಾರಿ ಆರಿಫ್ ಕೋಡಿ, ಕೆಸಿಎಫ್ ಅಂತಾರಾಷ್ಟ್ರೀಯ ಕೌನ್ಸಿಲರ್ ಇಬ್ರಾಹೀಂ ಹಾಜಿ ಅತ್ರಾಡಿ, ಕರ್ನಾಟಕ ಮುಸ್ಲಿಮ್ ಜಮಾಅತ್ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಕೆಸಿಎಫ್ ಒಮಾನ್ ಮೀಡಿಯಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಲಿ ಸುಳ್ಯ, ಕೆಸಿಎಫ್ ಒಮಾನ್ ಐ ಟೀಮ್ ಕೋ ಆರ್ಡಿನೇಟರ್ ಹನೀಫ್ ಮನ್ನಾಫು, ಸೈಯದ್ ಸೈಫುಲ್ಲ ಸಾಬ್ ಜಗಳೂರು, ಕೆಸಿಎಫ್ ಜುಬೈಲ್ ಸೆಕ್ಟರ್ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಅಬ್ದುಸ್ಸಮದ್ ಕಾನಕೆರೆ, ಹನೀಫ್ ಸಅದಿ ಶಿಕಾರಿಪುರ, ಕೆಸಿಎಫ್ ಬೌಶರ್ ಝೋನ್ ಅಧ್ಯಕ್ಷ ಸಲೀಮ್ ಮಿಸ್ಬಾಯಿ, ಎಲ್. ವಿಶ್ವನಾಥ್ ಜಗಳೂರು, ಟಿ.ನೂರ್ ಮುಹಮ್ಮದ್ ಸಾಬ್, ಸೈಯದ್ ಮುಕ್ತಿಯಾರ್ ಅಹ್ಮದ್ ರಝ್ವಿ, ಶಮೀರ್ ಉಸ್ತಾದ್ ಹೂಡೆ, ಮನಾಫ್ ಹಾಜಿ ದಾವಣಗೆರೆ, ಜೆ.ಆರ್.ಶಫೀಉಲ್ಲ ಖಾನ್, ಖಲಂದರ್ ಹಝ್ರತ್ ಜಗಳೂರು, ಸೈಯದ್ ಸೈಫುದ್ದೀನ್ ರಝ್ವಿ, ಮುಹಮ್ಮದ್ ಅರ್ಫಾತ್ ಮೌಲಾನ, ಮುಹಮ್ಮದ್ ಝಿಯಾಉಲ್ಲ ಹಝ್ರತ್, ಇಮಾಮ್ ಹಸೇನ್ ಹಝ್ರತ್, ಇಹ್ಸಾನ್ ಕರ್ನಾಟಕ ಉಪಾಧ್ಯಕ್ಷ ಬಿ.ಎ.ಇಬ್ರಾಹೀಂ ಸಖಾಫಿ, ಶಿವಮೊಗ್ಗ, ಇಹ್ಸಾನ್ ಕರ್ನಾಟಕ ಕೋಶಾಧಿಕಾರಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಇಹ್ಸಾನ್ ನಾಯಕರಾದ ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಇಸ್ಮಾಯೀಲ್ ಸಅದಿ ಕಿನ್ಯ, ಅಬ್ದುಲ್ ಹಮೀದ್ ಮಡಿಕೇರಿ, ಇಸ್ಹಾಕ್ ಝಹುರಿ ಸೂರಿಂಜೆ, ಕೆಸಿಎಫ್ ನಿಝ್ವ ಝೋನ್ ನ ಶಿಕಾರಿಪುರ ಶಾಫಿ ಮದ್ರಸ ಅಧ್ಯಾಪಕ ಹನೀಫ್ ಸಅದಿ, ಅಬ್ದುರ್ರಹ್ಮಾನ್ ಮೊಗರ್ಪಣೆ ಸುಳ್ಯ, ಸಿದ್ದೀಕ್ ಕಟ್ಟೆಕ್ಕಾರ್ ಸುಳ್ಯ, ಮಾಝಿನ್ ಹೆರಿಟೇಜ್ ಕಟ್ಟಡ ಕಾಮಗಾರಿಯ ಕಾಂಟ್ರಾಕ್ಟರ್ ಅಕ್ಬರ್ ಉಪ್ಪಳ್ಳಿ ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ , ಝೋನ್, ಸೆಕ್ಟರ್ ನಾಯಕರು, ಸದಸ್ಯರು, ಎಸ್.ವೈಎಸ್, ಎಸ್ಸೆಸ್ಸೆಫ್ ನಾಯಕರು ಮತ್ತು ಸದಸ್ಯರು ಉಪಸ್ಥಿತರಿದ್ಮರು.
ಕಾರ್ಯಕ್ರಮದಲ್ಲಿ ಇಹ್ಸಾನ್ ಕರ್ನಾಟಕ ವತಿಯಿಂದ ಕೆಸಿಎಫ್ ಒಮಾನ್ ನ ರಾಷ್ಟ್ರೀಯ ನಾಯಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕಾವಲ್ಕಟ್ಟೆ ಹಝ್ರತ್, ಶಾಫಿ ಸಅದಿ, ಝೈನಿ ಉಸ್ತಾದ್, ಲತೀಫ್ ಸಅದಿ, ಅಕ್ಬರ್ ಉಪ್ಪಳ್ಳಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಇಹ್ಸಾನ್ ಕರ್ನಾಟಕ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಸ್ವಾಗತಿಸಿದರು. ಮುಹಮ್ಮದ್ ಇಸ್ಹಾಕ್ ಸಖಾಫಿ ವಂದಿಸಿದರು.