VIDEO- ಪರಿಹಾರದ ಹಣ ವಾಹನಕ್ಕೆ ಎಸೆದ ವಿಚಾರ: ಸಿದ್ದರಾಮಯ್ಯ ಪ್ರತಿಕ್ರಿಯೆ ಏನು?

Update: 2022-07-15 12:34 GMT

ಬಾಗಲಕೋಟೆ: 'ಗಾಯಾಳುಗಳಿಗೆ ಮಾನವೀಯತೆ ದೃಷ್ಟಿಯಿಂದ ಹಣ ನೀಡಲಾಗಿತ್ತು. ಮತ್ತೆ ಅವರಿಗೆ ಹಣ ವಾಪಸ್ ಕೊಟ್ಟಿದ್ದೇವೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಗಾಯಾಳುಗಳಿಗೆ ನೀಡಿದ್ದ ಹಣವನ್ನು ಸಿದ್ದರಾಮಯ್ಯ ಅವರ ಬೆಂಗಾವಲು ವಾಹನದತ್ತ ಎಸೆದಿರುವ ಕುರಿತು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, 'ಇದು ಪರಿಹಾರ ಅಲ್ಲ. ಕಷ್ಟದಲ್ಲಿರುವವರಿಗೆ ಅನುಕೂಲ ಆಗಲಿ' ಎಂದು ನೀಡಿದ್ದೇನೆ ಎಂದರು.

ಇತ್ತೀಚೆಗೆ  ಬಾದಾಮಿಯ ಕೆರೂರು ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಭೇಟಿಯಾಗಲು ಸಿದ್ದರಾಮಯ್ಯ ಆಗಮಿಸಿದ್ದಾಗ ಗಾಯಾಳುಗಳಿಗೆ ಸಿದ್ದರಾಮ್ಯಯ ನೀಡಿದ್ದ ಪರಿಹಾರದ ಹಣವನ್ನು ಅವರ ಬೆಂಗಾವಲು ವಾಹನದತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News