ಕೊಳ್ಳೇಗಾಲ: ಉಪಹಾರ ಸೇವಿಸಿ ಮೂರು ಮಕ್ಕಳು ಸೇರಿ 23ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Update: 2022-07-19 17:51 GMT

ಕೊಳ್ಳೇಗಾಲ. ಜು.19. ಹುಟ್ಟುಹಬ್ಬಕ್ಕಾಗಿ ತಯಾರಿಸಿದ ಉಪಾಹಾರ ಸೇವಿಸಿ ಮೂರು ಮಕ್ಕಳು ಸೇರಿ 23 ಕ್ಕೂ ಹೆಚ್ಚು ಮಂದಿ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ತಾಲೂಕಿನ ಹಿತ್ತಲದೊಡ್ಡಿ ಯಶ್ವಂತ್(9), ಪ್ರಿಯಾಂಕ (18), ಲಾವಣ್ಯ (7), ಕಮಲ(25) , ಮೇಘನಾ(13), ಕುಣಗಳ್ಳಿ ಗ್ರಾಮದ ಪುಟ್ಟಲಕ್ಷಮ್ಮ(50), ಭಾಗ್ಯಮ್ಮ (35), ಪುಟ್ಟತಾಯಮ್ಮ(35), ಸಿದ್ದಮ್ಮ (70), ದೇವಿ(28), ಮಹದೇವಮ್ಮ(60) ಸೇರಿದಂತೆ 23 ಯಷ್ಟು ಮಂದಿ ಅಸ್ವಸಗೊಂಡು ಆಸ್ಪತ್ರೆಯಲ್ಲಿ ದಾಕಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಚಾರ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ಎನ್.ಮಹೇಶ್ ಅವರು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಬಳಿಕ ವೈದ್ಯರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ತಿಳಿಸಿದರು.

ಈ ಸಂಧರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಮರಿಸ್ವಾಮಿ, ಕುಣಗಳ್ಳಿ ಗ್ತಾ.ಪಂ ಅಧ್ಯಕ್ಷ ಸಿದ್ದಪ್ಪಸ್ವಾಮಿ, ಮುಖಂಡ ಜಗದೀಶ್, ಜಕಾವುಲ್ಲ, ಮಹಾದೇವಸ್ವಾಮಿ, ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News