VIDEO- ಮತ್ತೆ ಮಂತ್ರಿಯಾಗುವ ವಿಚಾರ: ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-07-20 18:17 GMT

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ದೊಡ್ಡ ರಿಲೀಫ್ ಸಿಕ್ಕ ಹಿನ್ನಲೆಯಲ್ಲಿ ಬುಧವಾರ  ಅವರ ನಿವಾಸದಲ್ಲಿ  ಸಂಭ್ರಮಾಚರಣೆ ಮಾಡಲಾಯಿತು.

ಇದೆ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮತ್ತೆ ಸಚಿವನಾಗುವ ವಿಚಾರ ಭಾರತೀಯ ಜನತಾ ಪಾರ್ಟಿ ಮತ್ತು ನಾಯಕರ ಕೈಯ್ಯಲ್ಲಿದೆ. ನಮ್ಮ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧವಾಗಿರುತ್ತೇನೆ. ಅಕಸ್ಮಾತ್ ಮಂತ್ರಿ ಮಾಡಿದರೆ ಯಾವ ಖಾತೆ ನೀಡಬೇಕು ಅನ್ನುವುದ ಮುಖ್ಯಮಂತ್ರಿ ಅವರಿಗೆ ಬಿಟ್ಟ ತೀರ್ಮಾನ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿದ್ದರು. ಏನೂ ಆಗುವುದಿಲ್ಲ ಧೈರ್ಯವಾಗಿರು ಎಂದು ತಿಳಿಸಿದ್ದಾರೆ. ಆಗ ಪ್ರಕರಣ ದಾಖಲಾದಾಗಲೂ ಯಡಿಯೂರಪ್ಪ ಅವರು "ಈಶ್ವರಪ್ಪ ತಪ್ಪು ಮಾಡಿಲ್ಲ. ಮುಕ್ತವಾಗಿ ಬರುತ್ತಾರೆ" ಎಂದು ಹೇಳಿದ್ದರು. ಈಗಲೂ ಧೈರ್ಯ ಹೇಳಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News