ಪಿಎಸ್ಸೈ ನೇಮಕಾತಿ ಹಗರಣ: ಚಾರ್ಜ್ಶೀಟ್ಗೆ ಸಿದ್ಧತೆ; ಪ್ರಾಸಿಕ್ಯೂಟರ್ ನೇಮಕ
Update: 2022-07-25 14:09 GMT
ಬೆಂಗಳೂರು, ಜು.25: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಇದರ ಬೆನ್ನಲ್ಲೇ, ಪ್ರಕರಣ ಬಗ್ಗೆ ಕೋರ್ಟ್ನಲ್ಲಿ ಸಮರ್ಪಕ ವಾದ ಮಂಡಿಸಲು ಪಿ.ಪ್ರಸನ್ನಕುಮಾರ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂರ್ಟ್ ಆಗಿ ನೇಮಕ ಮಾಡಲಾಗಿದೆ.
ನೇಮಕಾತಿ ಅಕ್ರಮ ಸಂಬಂಧ ಹೈಗ್ರೌಂಡ್ಸ್, ರಾಮಮೂರ್ತಿನಗರ, ಕೋರಮಂಗಲ, ಯಲಹಂಕ ನ್ಯೂಟೌನ್ ಹಾಗೂ ಹಲಸೂರು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಎಡಿಜಿಪಿ ಅಮೃತ್ ಪೌಲ್ ಸೇರಿ 35ಕ್ಕೂ ಹೆಚ್ಚು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ.