ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿ ರಾಜ್ಯ ಸರಕಾರ ಆದೇಶ

Update: 2022-07-25 16:27 GMT

ಬೆಂಗಳೂರು, ಜು.25: ರಾಜ್ಯ ಸರಕಾರವು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವೂ ಸೇರಿದಂತೆ ಒಟ್ಟು 25 ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ನಿರ್ದೇಶಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ವಿವಿಧ ನಿಗಮ- ಮಂಡಳಿಗೆ ಆಯ್ಕೆಯಾದ ಅಧ್ಯಕ್ಷರ ಪಟ್ಟಿ

ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ನಿಯಮಿತದ ನಿರ್ದೇಶಕ ಹಾಗೂ ಅಧ್ಯಕ್ಷ-ರಘು ಕೌಟಿಲ್ಯ, ಕರ್ನಾಟಕ ಕಾಡು ಗೊಲ್ಲ ಅಭಿವೃದ್ಧಿ ನಿಗಮ(ಬೆಂಗಳೂರು)ದ ಅಧ್ಯಕ್ಷ-ಚಂಗಾವರ ಮಾರಣ್ಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ(ಮೈಸೂರು)ದ ಅಧ್ಯಕ್ಷ-ಎಂ.ಕೆ.ಶ್ರೀನಿವಾಸ್(ಮಿರ್ಲೆ ಶ್ರೀನಿವಾಸಗೌಡ), ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ(ಬೆಂಗಳೂರು)ಅಧ್ಯಕ್ಷ-ಎಂ.ಕೆ.ವಾಸುದೇವ್. ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್(ಬೆಂಗಳೂರು)ಅಧ್ಯಕ್ಷ-ಎನ್.ಎಂ.ರವಿ ನಾರಾಯಣ ರೆಡ್ಡಿ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ(ಇಂಡಿ-ವಿಜಯಪುರ)ಅಧ್ಯಕ್ಷ-ಚಂದ್ರಶೇಖರ ಕವಟಗಿ, ಕರ್ನಾಟಕ ರೇಶ್ಮೆ ಮಾರಾಟ ಮಂಡಳಿ(ಬೆಂಗಳೂರು)ಅಧ್ಯಕ್ಷ-ಬಿ.ಸಿ.ನಾರಾಯಣಸ್ವಾಮಿ, ಕರ್ನಾಟಕ ರೇಶ್ಮೆ ಉದ್ಯಮ ನಿಗಮ(ಬೆಂಗಳೂರು)ಅಧ್ಯಕ್ಷ-ಗೌತಮ್ ಗೌಡ ಎಂ., ಕರ್ನಾಟಕ ಗೇರು ಅಭಿವೃದ್ಧಿ ನಿಗಮ(ಬೆಂಗಳೂರು)ಅಧ್ಯಕ್ಷ-ಮಣಿರಾಜ ಶೆಟ್ಟಿ(ಉಡುಪಿ), ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ(ಬೆಂಗಳೂರು)ಅಧ್ಯಕ್ಷ-ಗೋವಿಂದ ಜಟ್ಟಪ್ಪ ನಾಯಕ.

ಕರ್ನಾಟಕ ಮೃಗಾಲಯ ಪ್ರಾಧಿಕಾರ(ಮೈಸೂರು)ಅಧ್ಯಕ್ಷ-ಎಂ.ಶಿವಕುಮಾರ್, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ(ಬೆಂಗಳೂರು)ಅಧ್ಯಕ್ಷ-ಎನ್.ರೇವಣ್ಣಪ್ಪ, ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ(ಬೆಂಗಳೂರು) ಅಧ್ಯಕ್ಷ-ಎನ್.ಎಂ.ರವಿಕಾಳಪ್ಪ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ(ಬೆಂಗಳೂರು) ನಿರ್ದೇಶಕ ಹಾಗೂ ಅಧ್ಯಕ್ಷ-ಧರ್ಮಣ್ಣ ದೊಡ್ಡಮನಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ(ಮಂಗಳೂರು) ಅಧ್ಯಕ್ಷ-ಎ.ವಿ.ತೀರ್ಥರಾಮ(ದಕ್ಷಿಣ ಕನ್ನಡ). 

ಮೆ.ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್(ಎಂಸಿಎ-ಬೆಂಗಳೂರು) ಅಧ್ಯಕ್ಷ ಹಾಗೂ ನಿರ್ದೇಶಕ-ಎಂ.ಎಸ್.ಕರೀಗೌಡ್ರು, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಬೆಂಗಳೂರು) ಅಧ್ಯಕ್ಷ-ಗುತ್ತಿಗನೂರು ವಿರೂಪಾಕ್ಷ ಗೌಡ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ(ಬೆಂಗಳೂರು)ಯ ಸದಸ್ಯ ಹಾಗೂ ಅಧ್ಯಕ್ಷ-ಕೆ.ವಿ.ನಾಗರಾಜ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ(ಬೆಂಗಳೂರು) ಅಧ್ಯಕ್ಷ-ಮಾರುತಿ ಮಲ್ಲಪ್ಪ ಅಪ್ಪಗಿ. ಕರ್ನಾಟಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಮುನಿರಾಬಾದ್)ಅಧ್ಯಕ್ಷ-ಕೊಲ್ಲಾ ಶೇಷಗಿರಿ ರಾವ್, ಕರ್ನಾಟಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾವೇರಿ ಜಲಾನಯನ ಯೋಜನೆ)ಅಧ್ಯಕ್ಷ-ಜಿ.ನಿಜಗುಣ ರಾಜು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಬೆಂಗಳೂರು)ಅಧ್ಯಕ್ಷ-ಎಂ.ಶರವಣ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ(ಬೆಂಗಳೂರು)ಅಧ್ಯಕ್ಷ-ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ(ಬೆಂಗಳೂರು)ಅಧ್ಯಕ್ಷ-ಕೆ.ಪಿ.ವೆಂಕಟೇಶ್, ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಯಾದಗಿರಿ ಜಿಲ್ಲೆಯ ದೇವೇಂದ್ರನಾಥ್ ಕೆ. ನಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News