ಮಂಗಳೂರಿನಲ್ಲಿ ಫಾಝಿಲ್ ಹತ್ಯೆಯ ಸುದ್ದಿ ಭಯ ಹುಟ್ಟಿಸುವಂತಿದೆ: ಬಿ.ಕೆ ಹರಿಪ್ರಸಾದ್ ಆತಂಕ

Update: 2022-07-28 17:33 GMT

ಬೆಂಗಳೂರು: ಮಂಗಳೂರು ನಗರದ ಹೊರ ವಲಯ  ಸುರತ್ಕಲ್ ನಲ್ಲಿ ದುಷ್ಕರ್ಮಿಗಳ ತಂಡದಿಂದ ಫಾಝಿಲ್ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಮಂಗಳೂರಿನಲ್ಲಿ ಫಾಝಿಲ್ ಹತ್ಯೆಯ ಸುದ್ದಿ ಭಯ ಹುಟ್ಟಿಸುವಂತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

'ಇದು ಬಿಜೆಪಿ ಕೋಮುಗಲಭೆಗಳನ್ನು ಅಪಾಯಕಾರಿ ಮಟ್ಟಕ್ಕೆ ಎಬ್ಬಿಸುತ್ತಿರುವ ಪರಿಣಾಮ. ರಾಜ್ಯವು ಹಿಂದೂ-ಮುಸ್ಲಿಮರ ರೇಖೆಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವಿಭಜನೆಯಾಗಿದೆ.  ಬಿಜೆಪಿ ಧಾರ್ಮಿಕವಾಗಿ ವಿಭಜಿಸುವ ಕಾರ್ಯಸೂಚಿಯನ್ನು ನೋಡಿಕೊಳ್ಳುತ್ತಿದೆ ಮತ್ತು ಈ ಪರಿಸ್ಥಿತಿಗೆ ಬಿಜೆಪಿಯೇ  ನೇರ ಹೊಣೆಯಾಗಿದೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ...  ಸುರತ್ಕಲ್; ದುಷ್ಕರ್ಮಿಗಳ ತಂಡದಿಂದ ದಾಳಿ: ಗಾಯಾಳು ಯುವಕ ಮೃತ್ಯು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News