ಉಪ್ಪಿನಂಗಡಿ: ನಾಯಿ ಕಚ್ಚಿ ಹಲವರಿಗೆ ಗಾಯ; ಹುಚ್ಚು ನಾಯಿ ಭೀತಿಯಲ್ಲಿ ಜನತೆ

Update: 2022-07-29 16:32 GMT
ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಸಮೀಪದ ನೆಡ್ಚಿಲ್‍ನಲ್ಲಿ ನಾಯಿಯೊಂದು ಹಲವರಿಗೆ ಕಚ್ಚಿ ಗಾಯಗೊಳಿಸಿದ್ದು, ಪರಿಸರದಲ್ಲಿ ಹುಚ್ಚು ನಾಯಿಯ ಭೀತಿ ಉಂಟಾಗಿದೆ.

ಶುಕ್ರವಾರ ಈ ಪರಿಸರದ ಹಲವು ನಾಯಿಗಳಿಗೆ ಈ ನಾಯಿ ಕಚ್ಚಿದ್ದು, ವೃದ್ಧೆಯೋರ್ವರು ಸೇರಿದಂತೆ ಕೆಲವರಿಗೆ ಇದು ಕಚ್ಚಿದೆ. ಅಲ್ಲದೇ, ಕೆಲವರ ಮನೆಯೊಳಗೂ ನುಗ್ಗಲು ಯತ್ನಿಸಿದೆ. ಇಲ್ಲಿನ ಜನತಾ ಕಾಲನಿಯಲ್ಲಿರುವ ಮನೆಯೊಂದರಲ್ಲಿ ಸಾಕಿದ ನಾಯಿ ಇದೆಂದು ಹೇಳಲಾಗುತ್ತಿದ್ದು, ಅವರು ಅದಕ್ಕೆ ಹುಚ್ಚಿಲ್ಲ. ರಿಕ್ಷಾ ಅಪಘಾತವಾಗಿ ಅದರ ತಲೆಗೆ ಪೆಟ್ಟಾಗಿತ್ತು. ಆದ್ದರಿಂದ ಅದು ಈ ರೀತಿ ಮಾಡುತ್ತಿದೆ ಎನ್ನುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ನಾಯಿ ಕಚ್ಚಿದಾಗ ರೇಬಿಸ್ ಚುಚ್ಚುಮದ್ದು ತೆಗೆದುಕೊಳ್ಳವುದು ಅನಿವಾರ್ಯವಾಗಿದ್ದು, ಈ ನಾಯಿಯಿಂದಾಗಿ ಮಾತ್ರ ಈಗ ಪರಿಸರದಲ್ಲಿ ಆತಂಕ ಮನೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News