ಚಿಕ್ಕಮಗಳೂರು ಉಪ ವಿಭಾಗಧಿಕಾರಿಗೆ ಮಂಡ್ಯ ಎಡಿಸಿಯಾಗಿ ವರ್ಗಾವಣೆ
Update: 2022-08-01 16:19 IST
ಚಿಕ್ಕಮಗಳೂರು, ಆ.1: ಚಿಕ್ಕಮಗಳೂರು ಉಪ ವಿಭಾಗಧಿಕಾರಿಯಾಗಿರುವ ಎಚ್. ಆರ್ ನಾಗರಾಜ್ ಅವರನ್ನು ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ನೇಮಿಸಿ ಸರಕಾರ ತಕ್ಷಣದಲ್ಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಕಳೆದೆರಡು ವರ್ಷದಿಂದ ಉಪವಿಭಾಗಧಿಕಾರಿಯಾಗಿ ಕಾರ್ಯನಿರ್ವಸುತ್ತಿದ ನಾಗರಾಜ್ ಅನೇಕ ಜನಪ್ರಿಯ ಕೆಲಸಗಳನ್ನು ಮಾಡಿದ್ದು ಸಾರ್ವಜನಿಕ ವಿಶ್ವಾಸ ಗಳಿಸಿದ್ದರು.