ಮಾಧ್ಯಮ ಮಾನ್ಯತಾ ಸಮಿತಿ ರಚನೆ

Update: 2022-08-03 18:00 GMT

ಬೆಂಗಳೂರು, ಆ. 3: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ' ಪುನರ್ ರಚನೆ ಮಾಡಿದ್ದು, ಸಮಿತಿ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಹನುಮಂತರಾವ್ ಬೈರಾಮಡಗಿ, ರುದ್ರಣ್ಣ ಹರ್ತಿಕೋಟೆ ಸೇರಿದಂತೆ 12 ಮಂದಿ ಇದ್ದಾರೆ.

ಪತ್ರಕರ್ತರಾದ ಮೋಹನ್ ಕುಲಕರ್ಣಿ, ಎ.ಹರಿಪ್ರಸಾದ್, ಕೆ.ಎಸ್.ಗಣೇಶ್, ನಾಮನಿರ್ದೇಶಿತ ಪ್ರತಿನಿಧಿಗಳಾಗಿ ಎಚ್.ಪಿ. ಪುಣ್ಯವತಿ, ವಿನೋದ್ ಕುಮಾರ್ ಬಿ.ನಾಯ್ಕ್, ಎಚ್.ಎಸ್.ರವೀಶ್, ವಿಜಯಕುಮಾರ್ ಮಲಗಿಹಾಳ್, ಶಂಕರ್ ಪಾಗೋಜಿ ಅವರನ್ನು ನೇಮಕ ಮಾಡಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ ಎಂದು ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News