ಸಿಎಂ, ಗೃಹ ಸಚಿವರ ಬದಲಾವಣೆ ಇಲ್ಲ: ಸಚಿವ ಉಮೇಶ್ ಕತ್ತಿ

Update: 2022-08-09 14:45 GMT

ವಿಜಯಪುರ: ಆ. 9: ಸಿಎಂ ಬದಲಾವಣೆ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 2023 ಚುನಾವಣೆ ನಡೆಯುತ್ತದೆ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. 

ಡೋಣಿ ನದಿಯ ಪ್ರವಾಹ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಿಎಂ ಬದಲಾವಣೆ, ಗೃಹ ಸಚಿವ ಬದಲಾವಣೆ ಇಲ್ಲ. ಸಿಎಂ, ಗೃಹ ಸಚಿವರ ಬದಲಾವಣೆ ವಿಚಾರ ಕೇವಲ ಮಾಧ್ಯಮ ಸೃಷ್ಟಿ ಆಗಿದೆ. ಆಗಷ್ಟ್ 15ಕ್ಕೆ ಸಿಎಂ ಧ್ವಜಾರೋಹಣ ಮಾಡ್ತಾರೆ. ಬಿಜೆಪಿ ಕಾರ್ಯಕರ್ತರ ರಾಜೀನಾಮೆಯಿಂದ ಯಾವುದೇ ಡ್ಯಾಮೇಜ್ ಆಗಿಲ್ಲ'' ಎಂದರು.

ಅಲ್ಲದೇ, ಇದೇ ವೇಳೆಯಲ್ಲಿ ಸಚಿವ ಉಮೇಶ ಕತ್ತಿಯಿಂದ ಡೋಣಿ ನದಿ ಪ್ರವಾಹ ಹಾನಿ ಪರಿಶೀಲನೆ ನಡೆಸಿದರು.ಜಿಲ್ಲೆಯ ತಿಕೋಟಾ ತಾಲೂಕಿನ ಧನ್ಯಾಳ, ಧನಶ್ಯಾಳ್, ಹರನಾಳ ಗ್ರಾಮಕ್ಕೆ ಭೇಟಿ ನೀಡಿ ಜಿಲ್ಲಾಡಳಿತದ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಇನ್ನು ''ಡೋಣಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರಕ್ಕೆ ಯತ್ನಿಸುತ್ತೇವೆ.‌ ಪ್ರತಿ ಮಳೆಗಾಲದಲ್ಲಿ ಡೋಣಿ ನದಿ ಆವಾಂತರ ಸೃಷ್ಟಿಸುತ್ತಿದೆ. ಪುನಃಶ್ಚೇತನ ಹಾಗೂ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳುತ್ತೇವೆ'' ಎಂದು ಸಚಿವ ಕತ್ತಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News