ಶಾಸಕ ಯತ್ನಾಳ್ ಬಿಜೆಪಿಯ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್ ಇದ್ದಂಗೆ: ಕಾಂಗ್ರೆಸ್

Update: 2022-08-09 15:04 GMT

ಬೆಂಗಳೂರು: 'ಶಾಸಕ ಯತ್ನಾಳ್ ಬಿಜೆಪಿಯ ಭವಿಷ್ಯ ಹೇಳುವ ನಾಸ್ಟ್ರಾಡಾಮಸ್ ಇದ್ದಂಗೆ' ಎಂದು ಕಾಂಗ್ರೆಸ್ ಹೇಳಿದೆ. 

ರಾಜ್ಯದಲ್ಲಿ ಮುಖ್ಯಂಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ರಾಜ್ಯದಲ್ಲಿ 3ನೇ ಸಿಎಂ ಪ್ರತಿಷ್ಠಾಪನೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ ಎಂಬ ಕಾಂಗ್ರೆಸ್ ನ ಸರಣಿ ಟ್ವೀಟ್ ಗಳು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಇದೀಗ ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್,  ''ಬಿಎಸ್ ವೈ ಅವರ ಪದಚ್ಯುತಿಯ ಬಗ್ಗೆ ಹೇಳಿದ್ದು ನಿಜವಾಗಿತ್ತು, ಈಗ ಬೊಮ್ಮಾಯಿಯವರ ಬಗ್ಗೆ ಹೇಳುವುದೂ ನಿಜವಾಗುವಂತಿದೆ! ಅವರು ಹೇಳುವಂತೆ ಅಮಿತ್ ಶಾ ಅವರು ಬಸವರಾಜ ಬೊಮ್ಮಾಯಿ ಬದಲಾವಣೆಯ ನಿರ್ಣಯ ತೆಗೆದುಕೊಳ್ಳುವ 'ಕಾಲ' ಸನ್ನಿಹಿತವಾಗಿದೆ ಅಲ್ಲವೇ'' ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ. 

-------------------------------------

'ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿ ವಿಚಾರದಲ್ಲಿ ಮಾಡಿರುವ ಟ್ವೀಟ್ ಹಾಸ್ಯಾಸ್ಪದ. ರಾಜ್ಯ ಸರಕಾರದ ನೇತೃತ್ವವನ್ನು ವಹಿಸಿರುವ ಬಸವರಾಜ ಬೊಮ್ಮಾಯಿ ಅವರೇ ಈಗಲೂ ಮುಖ್ಯಮಂತ್ರಿ, ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ. ನಂತರವೂ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ'.

-ಆರ್. ಅಶೋಕ್, ಕಂದಾಯ ಸಚಿವರು


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News