ಸಿದ್ದರಾಮೋತ್ಸವಕ್ಕೆ ನಮ್ಮ ಕಾರ್ಯಕರ್ತರೂ ಬಸ್ ಮಾಡ್ಕೊಂಡು ಹೋಗಿದ್ದರು: ಜೆಡಿಎಸ್ ಶಾಸಕ ಶಿವಲಿಂಗೇಗೌಡ

Update: 2022-08-10 17:23 GMT

ಹಾಸನ:  'ಸಿದ್ದರಾಮೋತ್ಸವಕ್ಕೆ ಜೆಡಿಎಸ್ ಕಾರ್ಯಕರ್ತರು ಕೂಡ ಹೋಗಿದ್ದರು' ಎಂದು ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನೀವೆಲ್ಲಿ ಇರ್ತೀರೋ ನಾವೂ ಇಲ್ಲೇ ಇರ್ತೀವಿ, ನಾವು ಕಾಂಗ್ರೆಸ್ ಅಂತಲ್ಲ, ನಾವು ಸಿದ್ದರಾಮಯ್ಯರ ಅಭಿಮಾನಿಗಳು. ಅವರ ಹುಟ್ಟು ಹಬ್ಬ ಒಮ್ಮೆ ನೋಡಿಕೊಂಡು ಬರ್ತೀವಿ ಅಂತ ಕಾರ್ಯಕರ್ತರು ಹೇಳಿದ್ರು'' ಎಂದು ತಿಳಿಸಿದರು. 

'ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಾನು ಉಪಯೋಗ ಪಡೆದಿದ್ದೇನೆ. ಹಾಗಾಗಿ ಕಾರ್ಯಕರ್ತರು ಕೆಲವರು ಬಂದು ಸಹಾಯ ಕೇಳಿದಾಗ, ಬಸ್ಸಿಗೆ ಅಂತಲ್ಲ, ಅಲ್ಪ ಸ್ವಲ್ಪವ ಹಣ ಕೊಟ್ಟಿದ್ದು ನಿಜ ಎಂದ ಶಿವಲಿಂಗೇಗೌಡ, ನಾನೇ ಬಸ್ ವ್ಯವಸ್ಥೆ ಮಾಡಿ ಕಳಿಸಿದ್ದು ಅನ್ನೋದು ಸುಳ್ಳು'' ಎಂದು ಹೇಳಿದರು. 

ಇದನ್ನೂ ಓದಿ:  ಬಿಜೆಪಿ, ಜೆಡಿಎಸ್ ನಿಂದ 20 ಮಂದಿ ಶಾಸಕರು ಕಾಂಗ್ರೆಸ್‌ಗೆ: ಎಂ.ಲಕ್ಷ್ಮಣ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News