ಹೈಕೋರ್ಟ್ಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ
Update: 2022-08-12 16:42 GMT
ಬೆಂಗಳೂರು, ಆ.12: ಐವರನ್ನು ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಸರಕಾರ ಆದೇಶಿಸಿದೆ.
ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಜಿ.ಟಿ.ಶಿವಶಂಕರೇಗೌಡ, ನ್ಯಾಯಾಧೀಶರಾದ ಚಂದ್ರಶೇಖರ ಮೃತ್ಯುಂಜಯ ಜೋಶಿ, ನಿವೃತ್ತ ನ್ಯಾಯಾಧೀಶ ಅನಿಲ್ ಭೀಮಸೇನ ಕಟ್ಟಿ, ಗುರುಸಿದ್ದಯ್ಯ ಬಸವರಾಜ, ಉಮೇಶ್ ಮಂಜುನಾಥ್ ಭಟ್ ಅಡಿಗ ನೇಮಕಗೊಂಡಿರುವವರು.
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62. ಸದ್ಯ 44 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಐವರ ನೇಮಕದಿಂದ ಈ ಸಂಖ್ಯೆ 49ಕ್ಕೆ ತಲುಪಿದಂತಾಗಿದೆ.