ಮಂಗಳೂರು | ವೆಲ್ಫೇರ್ ಪಾರ್ಟಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Update: 2022-08-16 06:09 GMT

ಮಂಗಳೂರು, ಆ.16: ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಸೋಮವಾರನ ನಡೆಯಿತು.

ಧ್ವಜಾರೋಹಣವನ್ನು ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ಸಾಲ್ಯಾನ್ ನೆರವೇರಿಸಿದರು. ಈ ಸಂಧರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮೊಯಿನುದ್ದೀನ್ ಕಮರ್, ಜಿಲ್ಲಾಧ್ಯಕ್ಷ ಅಡ್ವೋಕೇಟ್ ಸರ್ಫರಾಝ್, ಜಿಲ್ಲಾ ಉಪಾಧ್ಯಕ್ಷೆ  ಮರಿಯಂ ಶಹೀರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸೈಫ್, ಜಿಲ್ಲಾ ಖಜಾಂಚಿ ಎಸ್.ಎಂ.ಮುತ್ತಲಿಬ್, ಜಿಲ್ಲಾ ವಕ್ತಾರ ಅರಫಾ ಮಂಚಿ ಹಾಗೂ  ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News